• Slide
    Slide
    Slide
    previous arrow
    next arrow
  • ‘ಉ.ಕ. ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ’ ಅಸ್ತಿತ್ವಕ್ಕೆ

    300x250 AD

    ಶಿರಸಿ: ನಗರದ ರೋಟರಿ ಸಭಾಭವನದಲ್ಲಿ ವೈದ್ಯಕೀಯ ಪ್ರತಿನಿಧಿಗಳ ಸಭೆಯು ಜು.23 ಶನಿವಾರದಂದು ಜರುಗಿತು.

    ಈ ಸಭೆಯಲ್ಲಿ ಉಪಸ್ಥಿತರಿದ್ದವರೆಲ್ಲರೂ ಸೇರಿ ಚರ್ಚಿಸಿ ‘ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ವೈದ್ಯಕೀಯ ಪ್ರತಿನಿಧಿಗಳ ಸಂಘ(ಶಿರಸಿ)’ ರಚನೆ ಮಾಡಲು ಒಮ್ಮತದಿಂದ ತೀರ್ಮಾನಿಸಲಾಯಿತು. ಆಗಮಿಸಿದ ಎಲ್ಲ ಸದಸ್ಯರ ಒಪ್ಪಿಗೆಯ ಮೇರೆಗೆ ಸಮಿತಿಯನ್ನು ರಚಿಸಲಾಯಿತು.

    300x250 AD

    ಸಂಘದ ಅಧ್ಯಕ್ಷರಾಗಿ ಸಂತೋಷ್ ನಾಯ್ಕ್ (Intas pharma ),ಉಪಾಧ್ಯಕ್ಷರಾಗಿ ವಿವೇಕ್ ಪೂಜಾರಿ(H@H), ಹೇಮಂತ್ ಮಡಿವಾಳ (Mankind ) ರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ ನಾಯ್ಕ್(Micro) , ಸಹ ಕಾರ್ಯದರ್ಶಿಯಾಗಿ ನಾಗರಾಜ್ ನಾಯ್ಕ್(Jenburt ), ಪ್ರದೀಪ್ ಕಬ್ಬರ್ (H@H), ಖಜಾಂಚಿಯಾಗಿ ಸತೀಶ್, ಸಹ -ಖಜಾಂಚಿ ಗುರುದಾಸ್ ಶಾನಭಾಗ್ (Cipla ), ಸಂಘಟನಾ ಕಾರ್ಯದರ್ಶಿ ರೋಷನ್ ಅಮೀನ್,ದತ್ತು ನಾಯ್ಕ್,ಸತೀಶ್ ಪೂಜಾರಿ, ದಿವಾಕರ್ ಗೌಡ, ನಿತಿನ್ ಶೆಟ್ಟಿ,ಶಶಿ ನಾಯ್ಕ್ (Mankind),ರವಿ ಪೂಜಾರಿ (H@H), ಸದಸ್ಯರಾಗಿ ನುಮಾನ್ ಖಾತಿಬ್, ಮೋಹನ್ ಪೂಜಾರಿ, ವಿಜಯಕುಮಾರ (ವಿಜು ),ರಾಜೀವ್ ನಾಯ್ಕ್, ಪ್ರಸನ್ನ ಶೋನಾಪುರ, ಆನಂದ ಗೌಡ, ವಿನಾಯಕ ನಾಯ್ಕ್ (Lupin), ಶಶಿ ನಾಯ್ಕ್ (Cipla) ಇವರನ್ನು ಆಯ್ಕೆ ಮಾಡಲಾಯಿತು. ಅಂತೆಯೇ ಮಾಧ್ಯಮ ಸಲಹೆಗಾರರಾಗಿ ವಿ ಎಸ್ ಹೆಗಡೆ, ನರೇಶ್ ನಾಯ್ಕ್, ಸುಂದರ್, ಗೌರವ ಅಧ್ಯಕ್ಷರಾಗಿ ಸದಾನಂದ ನಾಯ್ಕ್. (East-west), ನಿರಂಜನ ಹೆಗಡೆ (Lifestar Mankind ABM), ರಾಘು ಶೆಟ್ಟಿ (Liva healthcare ABM),ಅನಿಲ್ ನಾಯ್ಕ್ (Biochem) ಇವರನ್ನು ಒಮ್ಮತದಿಂದ ಆಯ್ಕೆಮಾಡಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top