Slide
Slide
Slide
previous arrow
next arrow

ಬದನಗೋಡ ಕೆರೆಗೆ ಬಾಗಿನ ಸಮರ್ಪಣೆ

300x250 AD

ಶಿರಸಿ: ತಾಲೂಕಿನ ಬದನಗೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ಮನುವಿಕಾಸ ಸಂಸ್ಥೆ, ಅಜಿಮ್ ಪ್ರೇಮ್‌ಜಿ ಫೌಂಡೇಶನ್ ಹಾಗೂ ಹೊಸಕೊಪ್ಪ ಗ್ರಾಮದ ರೈತರ ಸಹಭಾಗಿತ್ವದಲ್ಲಿ ಸತತ ಎರಡು ವರ್ಷಗಳ ಕಾಲ ಹೂಳೆತ್ತಿ ಅಭಿವೃದ್ಧಿಪಡಿಸಿದ ಕೆರೆ ತುಂಬಿದ್ದು, ಕೆರೆಗೆ ಬಾಗಿನ ಕೊಡುವ ಕಾರ್ಯಕ್ರಮವನ್ನು ಸಡಗರದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್, ಕಾಳಂಗಿ ಸೇವಾ ಸರ್ಕಾರಿ ಸಂಘದ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ, ಬನವಾಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ ಮಾಳಂಜಿ, ಬದನಗೋಡ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಭದ್ರು ಗೌಡ್ರು, ಗ್ರಾಮ ಪಂಚಾಯತಿ ಸದಸ್ಯ ಮಾರುತಿ ಮಟ್ಟೇರ್, ಲಕ್ಷ್ಮಿ ಚರಂತಿಮಠ, ಮನುವಿಕಾಸ್ ಸಂಸ್ಥೆಯ ಸಿಬ್ಬಂದಿ ಅಶ್ವತ್ ನಾಯ್ಕ ಹಾಗೂ ಊರ ಪ್ರಮುಖರಾದ ಮಲ್ಲಿಕಾರ್ಜುನ್ ಸ್ವಾಮಿ ಹಿರೇಮಠ, ಮಂಜುನಾಥ ಗೌಡ್ರು, ಚಂದ್ರಣ್ಣ ಕೊಂಡಜ್ಜಿ, ಎಫ್.ಎಸ್.ನಾಯ್ಕ, ರವಿ ನಾಯ್ಕ ಮತ್ತಿಹಳ್ಳಿ, ಮಂಜುನಾಥ ಚಲವಾದಿ, ಸುತ್ತಮುತ್ತಲಿನ ಊರ ಗ್ರಾಮಸ್ಥರು ರೈತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

300x250 AD
Share This
300x250 AD
300x250 AD
300x250 AD
Back to top