• Slide
    Slide
    Slide
    previous arrow
    next arrow
  • ಬೊಮ್ಮನಹಳ್ಳಿ ಜಲಾಶಯ ಭರ್ತಿ:ಎರಡು ಗೇಟ್ ಮೂಲಕ ನೀರು ಹೊರಕ್ಕೆ

    300x250 AD

    ದಾಂಡೇಲಿ: ತಾಲ್ಲೂಕಿನ ಅಂಬಿಕಾನಗರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬೊಮ್ಮನಹಳ್ಳಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಈ ಹಿನ್ನಲೆಯಲ್ಲಿ ಗುರುವಾರ ಜಲಾಶಯದ ಕ್ರಸ್ಟ್ ಗೇಟ್ ನಂ:05 ಮತ್ತು ಕ್ರಸ್ಟ್ ಗೇಟ್ ನಂ: 03ರಿಂದ ತಲಾ 1500ರಂತೆ ಒಟ್ಟು 3000 ಕ್ಯೂಸೆಕ್‌ನಷ್ಟು ಹೆಚ್ಚುವರಿ ನೀರನ್ನು ಹೊರ ಬಿಡಲಾಗಿದೆ.

    ಈ ಬಗ್ಗೆ ಮುಂಜಾಗೃತ ಕ್ರಮವಾಗಿ ಕೆಪಿಸಿ ಅಧಿಕಾರಿಗಳು ನದಿ ತೀರದ ಜನರಿಗೆ ಮುನ್ನೆಚ್ಚರಿಕಾ ಮಾಹಿತಿಯನ್ನು ನೀಡಿದ್ದರು. ಸಾರ್ವಜನಿಕರ ಸುರಕ್ಷತೆ, ಜಾನುವಾರುಗಳ ರಕ್ಷಣೆಯ ಜೊತೆಗೆ ಸುಗಮ ಸಂಚಾರ ವ್ಯವಸ್ಥೆಗಾಗಿ ಅಂಬಿಕಾನನಗರ ಠಾಣೆಯ ಪಿಎಸೈ ಮಂಜುನಾಥ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top