• Slide
    Slide
    Slide
    previous arrow
    next arrow
  • ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತ ಆರಂಭ

    300x250 AD

    ಹೊನ್ನಾವರ: ಶ್ರೀಕ್ಷೇತ್ರ ಬಂಗಾರಮಕ್ಕಿ ದೇವಸ್ಥಾನದ ಧರ್ಮಾಧಿಕಾರಿ ಮಾರುತಿ ಗುರೂಜಿಯವರ ಚಾತುರ್ಮಾಸ ವ್ರತವು ಆಷಾಢ ಶುದ್ಧ ಹುಣ್ಣಿಮೆ ಬುಧವಾರದಂದು ವ್ಯಾಸಪೂಜೆ ಹಾಗೂ ಇನ್ನಿತರ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು.

    ಲೋಕಕಲ್ಯಾಣಾರ್ಥದ ಮಹಾನ್ ಸಂಕಲ್ಪದೊಂದಿಗೆ ಶ್ರೀದೇವರಲ್ಲಿ ಪ್ರಾರ್ಥಿಸಿ ವ್ರತ ಆರಂಭಿಸಿದರು. ಇಂತಹ ಪುಣ್ಯ ಪರ್ವದ ಶುಭಾವಸರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಆಗಮಿಸಿ ಗುರೂಜಿಯವರ ದಿವ್ಯಾನುಗ್ರಹಕ್ಕೆ ಪಾತ್ರರಾದರು. ಅಂತೆಯೇ ಬೈಂದೂರು ಕ್ಷೇತ್ರದ ಶಾಸಕ ಸುಕುಮಾರ ಶೆಟ್ಟಿ ಆಗಮಿಸಿ ಶ್ರೀದೇವರ ದರ್ಶನ ಹಾಗೂ ಗುರುಗಳ ಆಶೀರ್ವಾದ ಪಡೆದರು. ಅಪಾರ ಭಕ್ತ ಗಣ ಸಮೂಹ ನೆರೆದಿದ್ದು, ಪೂಜ್ಯರ ಅನುಗ್ರಹ ಸಂದೇಶವನ್ನು ಪಡೆದು ಕೃತಾರ್ಥತೆಯನ್ನು ಪಡೆದರು.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top