Slide
Slide
Slide
previous arrow
next arrow

ಮಳೆಯ ಅಬ್ಬರ ಇಳಿಮುಖ:ಹಾನಿಗಳ ಲೆಕ್ಕಾಚಾರ

300x250 AD

ಹೊನ್ನಾವರ: ತಾಲೂಕಿನಲ್ಲಿ ಮಳೆಯ ಅಬ್ಬರ ಕೊಂಚ ಇಳಿಮುಖವಾಗಿದ್ದು, ಮನೆ- ತೋಟಕ್ಕೆ ನುಗ್ಗಿದ ನೀರು ಇಳಿಮುಖವಾಗಿದೆ. ಸತತವಾಗಿ ಸುರಿದ ಮಳೆಗೆ ತಾಲೂಕಿನಲ್ಲಿ ಅನೇಕ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ.

ತಾಲೂಕಿನ ಮಾಡಗೇರಿಯ ನಾರಾಯಣ ಆಚಾರಿ ಅವರ ಮನೆ ತೀವ್ರವಾಗಿ ಹಾನಿಯಾಗಿದ್ದು, 70 ಸಾವಿರ ರೂ. ಹಾನಿಯಾಗಿದೆ. ಕೃಷ್ಣ ಆಚಾರಿ ಅವರ ಮನೆಗೂ ಹಾನಿಯಾಗಿದ್ದು, 19,400 ರೂ. ಹಾನಿಯಾಗಿದೆ. ಕರ್ಕಿಯ ಮಾರುತಿ ಶೇಟ್ ಅವರ ಮನೆಗೆ 80 ಸಾವಿರ ರೂ.ನಷ್ಟು ಹಾನಿಯಾಗಿದೆ. ಹೊನ್ನಾವರದ ವೆಂಕಟೇಶ ಮೊಗೇರ ಅವರ ಮನೆ ಭಾಗಶಃ ಹಾನಿಯಾಗಿದ್ದು, 25 ಸಾವಿರ ರೂ. ನಷ್ಟವಾಗಿದೆ.

300x250 AD

ಕುಳಕೋಡದ ವಿನುತಾ ಅಂಬಿಗ ಅವರ ಮನೆ ಭಾಗಶಃ ಹಾನಿಯಾಗಿದ್ದು, 10 ಸಾವಿರ ರೂ. ಹಾನಿಯಾಗಿದೆ. ಮಂಕಿಯ ಈಶ್ವರ ಮೊಗೇರ ಅವರ ಮನೆ ಭಾಗಶಃ ಹಾನಿಯಾಗಿ 15 ಸಾವಿರ ರೂ. ಹಾನಿಯಾಗಿದೆ. ಜಲವಳ್ಳಿಯ ಶ್ಯಾಮಲಾ ನಾಯ್ಕ ಅವರ ಮನೆ ಭಾಗಶಃ ಹಾನಿಯಾಗಿ 16,500 ರೂ. ಹಾನಿಯಾದ ಬಗ್ಗೆ ವರದಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This
300x250 AD
300x250 AD
300x250 AD
Back to top