• Slide
    Slide
    Slide
    previous arrow
    next arrow
  • ಛತ್ರಪತಿ ಶಿವಾಜಿ ಮಹಾರಾಜ ಸೇನೆ ಜಿಲ್ಲಾಧ್ಯಕ್ಷರಾಗಿ ಮಂಜುನಾಥ ಹರ್ಜಿ ನೇಮಕ

    300x250 AD

    ಶಿರಸಿ: ರಾಜ್ಯದಲ್ಲಿ ಕ್ಷತ್ರೀಯ ಮಾರಾಠ ಜನಾಂಗವನ್ನು ಸಂಘಟಿಸುವ ಹಾಗೂ ಅಭಿವೃದ್ಧಿ ಪಡಿಸಲು ಶ್ರಮಿಸುತ್ತಿರುವ ಛತ್ರಪತಿ ಶಿವಾಜಿ ಮಹಾರಾಜ ಸೇನೆ (ರಿ), ಬೆಂಗಳೂರು ಇದರ ಉತ್ತರ ಕನ್ನಡ ಜಿಲ್ಲಾ ಘಟಕಕ್ಕೆ ಜಿಲ್ಲಾಧ್ಯಕ್ಷರನ್ನಾಗಿ ಮಂಜುನಾಥ ರಾಮಣ್ಣ ಹರ್ಜಿ (ಕೀರ್ತೆಪ್ಪನವರ್)ರವರನ್ನು ನೇಮಕಮಾಡಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ವಿಕ್ರಮ ಸಿಂದ್ಯ ತಿಳಿಸಿದ್ದಾರೆ. ಮಂಜುನಾಥರವರು ಮರಾಠ ಸಮಾಜದ ಸಂಘಟನೆಗೆ ಶ್ರಮಿಸುತ್ತಿರುವುದನ್ನು ಪರಿಗಣಿಸಿ ರಾಜ್ಯ ಅಧ್ಯಕ್ಷರಾದ ಮಾರುತಿ ರಾವ್ ಮೋರೆ ಅವರ ಆದೇಶದ ಮೇರೆಗೆ ಇವರಿಗೆ ಈ ಜವಾಬ್ದಾರಿಯನ್ನು ವಹಿಸಿ ಕೂಡಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ತಾಲೂಕಾ ಸಮಿತಿಗಳನ್ನು /ಜಿಲ್ಲಾ ಘಟಕವನ್ನು ರಚಿಸುವ ಜವಾಬ್ದಾರಿ ಮತ್ತು ಜಿಲ್ಲಾದ್ಯಂತ ಪ್ರವಾಸ ಮಾಡಿ ಈ ಸಂಘಟನೆಯನ್ನು ಬಲಪಡಿಸಲು ಆದೇಶಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top