• Slide
    Slide
    Slide
    previous arrow
    next arrow
  • ಕಲ್ಲಾಮೆ ಮಾರಾಟ ಮಾಡುತ್ತಿದ್ದ ಈರ್ವರ ಬಂಧನ

    300x250 AD

    ಮುಂಡಗೋಡ: ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಕಲ್ಲಾಮೆಗಳನ್ನು ಹಿಡಿದು ಮಾರಾಟ ಮಾಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದವರು ಬಂಧಿಸಿದ ಘಟನೆ ಪಟ್ಟಣದ ಎಪಿಎಮ್‌ಸಿ ಗೇಟ್ ಹತ್ತಿರ ನಡೆದಿದೆ.

    ಹುನಗುಂದ ಗ್ರಾಮದ ಚಂದ್ರಗೌಡ ಹನಮಂತಗೌಡ ಹಾಗೂ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಚೆನ್ನಪ್ಪ ಲಮಾಣಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಒಂದು ಜೀವಂತ ಕಲ್ಲಾಮೆ, ನಾಲ್ಕು ಜೀವಂತ ನೀರಾಮೆಗಳನ್ನು ಅರಣ್ಯ ಸಂಚಾರಿ ದಳದವರು ವಶಪಡಿಸಿಕೊಂಡಿದ್ದಾರೆ.

    300x250 AD

    ದಾಂಡೇಲಿಯ ಅರಣ್ಯ ಸಂಚಾರಿ ದಳದ ಪಿಎಸೈ ಇ.ಸಿ.ಸಂಪತ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿ ಗಜಾನನ ನಾಯ್ಕ್, ಶಮೀರ ಲೋಹಾನಿ, ಎಮ್.ಬಿ.ಮುಲ್ಲಾ, ಚಂದ್ರಶೇಖರ ನಾಯ್ಕ್, ಪ್ರಶಾಂತ ನಾಯಕ್, ಕರಿಯಣ್ಣ ತಿಮ್ಮಯ್ಯ ಪಾಲ್ಗೊಂಡಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top