ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನಲ್ಲಿ 12ನೇ ಬೆಂಗಳೂರು- ಇಂಡಿಯಾ ನ್ಯಾನೋ 2022 ಸಮ್ಮೇಳನಕ್ಕೆ ಚಾಲನೆ ನೀಡಿದರು.
ಇಂದಿನಿಂದ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದೆ.
ಈ ಸಮ್ಮೇಳನ ನ್ಯಾನೋ ಸೈನ್ಸ್, ನ್ಯಾನೋ ಟೆಕ್ನಾಲಜಿ ಮೇಲೆ ಬೆಳಕು ಚೆಲ್ಲಲಿದ್ದು, 2,500ಕ್ಕೂ ಹೆಚ್ಚು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, “108 ವಿಶ್ವದರ್ಜೆಯ ನ್ಯಾನೋ ಟೆಕ್ ಸಂಶೋಧನೆ ಕೇಂದ್ರ ಬೆಂಗಳೂರಿನಲ್ಲಿದೆ. ಮೋದಿ ಅವರು ನ್ಯಾನೋ ಯೂರಿಯಾವನ್ನು ರೈತರಿಗೆ ಪರಿಚಯಿಸಿದ್ದಾರೆ. ಸಂಶೋಧನೆಯಿಂದ ಜನರ ಬದುಕನ್ನು ಸುಧಾರಿಸುವುದು ಪ್ರಧಾನಿಯ ಕನಸ್ಸಾಗಿದೆ. ಕೃಷಿ, ಜೀವ ವಿಜ್ಞಾನ ಮುಂತಾದ ಎಲ್ಲ ಕ್ಷೇತ್ರಗಳಲ್ಲೂ ಸಂಶೋಧನೆ ನಡೆಸಲು ಸರ್ಕಾರ ಸಹಾಯ ಮಾಡುತ್ತದೆ” ಎಂದರು.