ಮುಕ್ತಾಫಲೈಃ ಕಿಂ ಮೃಗಪಕ್ಷಿಣಾಂ ಚ ಮೃಷ್ಟಾನ್ನಪಾನಂ ಕಿಮು ಗರ್ದಭಾನಾಮ್
ಅಂಧಸ್ಯ ದೀಪೋ ಬಧಿರಸ್ಯ ಗೀತಂ ಮೂರ್ಖಸ್ಯ ಕಿಂ ಧರ್ಮಕಥಾಪ್ರಸಂಗಃ ||
ಹಕ್ಕಿಗಳು ಮತ್ತು ಕೆಲವು ಪ್ರಾಣಿಗಳು ಫಲಗಳನ್ನು ತಿನ್ನುತ್ತವೆ, ಆದರೆ ಫಲ ಅಂದ ಮಾತ್ರಕ್ಕೆ ಮುಕ್ತಾಫಲವನ್ನೇನೂ ಅವು ತಿನ್ನಲಾರವು. ಮುಕ್ತಾಫಲವೆಂದರೆ ಮುತ್ತು ಎಂದರ್ಥ. ಮುತ್ತುಗಳು ಮನುಷ್ಯನಿಗೆ ಬಹುಮೂಲ್ಲವಾದವುಗಳಾಗಲೀ, ಪ್ರಾಣಿ ಪಕ್ಷಿಗಳಿಗಲ್ಲ. ಹಾಗೇ, ಕತ್ತೆಗಳಿಗೆ ಸುಗ್ರಾಸ ಭೋಜನವನ್ನಿತ್ತೂ ಅದರಿಂದ ಪ್ರಯೋಜನವಿಲ್ಲ. ಅವಕ್ಕೆ ವ್ಯತ್ಯಾಸ ತಿಳಿಯುವುದಿಲ್ಲ. ಕರುಡನಿಗೆ ದೀಪದಿಂದಲೂ, ಕಿವುಡನಿಗೆ ಸುಶ್ರಾವ್ಯವಾದ ಹಾಡಿನಿಂದಲೂ ಪ್ರಯೋಜನವಿಲ್ಲ. ಹಾಗೆಯೇ ಧರ್ಮಬೋಧೆಯೆನ್ನುವ ಸಂಗತಿಯು ಮೂರ್ಖನಿಗೆ ನಿಷ್ಪ್ರಯೋಜಕವಾದ್ದು. ಅದರಿಂದ ಆತ ಬದಲಾಗುವುದಿಲ್ಲ, ಅದವನಿಗೆ ಅರ್ಥವೂ ಆಗುವುದಿಲ್ಲ.