ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಜೂ.13, ಶುಕ್ರವಾರದಂದು ಚುನಾವಣೆಯನ್ನು ಏರ್ಪಡಿಸಲಾಗಿತ್ತು.
ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೊಬೈಲ್ ಆ್ಯಪ್ ಬಳಸಿ ಮತದಾನ ಪದ್ದತಿಯನ್ನು ಏರ್ಪಡಿಸಲಾಗಿತ್ತು. ಮತದಾನ ಸಮಯದಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಲ.ಪ್ರೊ. ರವಿ ನಾಯಕ್ ಸಂತಸ ವ್ಯಕ್ತಪಡಿಸಿದರು. ಮುಖ್ಯೋಪಾಧ್ಯಾಯರಾದ ಗಣಪತಿ ಗೌಡ ಇವರ ಮಾರ್ಗದರ್ಶನದಲ್ಲಿ ಸಹ ಶಿಕ್ಷಕಿಯರಾದ ಶ್ರೀಮತಿ ಗೀತಾ ನಾಯ್ಕ್ ಮತ್ತು ಶ್ರೀಮತಿ ರೇಷ್ಮಾ ಮಿರಾಂಡ,ಶ್ರೀಮತಿ ರೇಖಾ ನಾಯ್ಕ್ ರವರ ನೇತೃತ್ವದಲ್ಲಿ ಶಿಕ್ಷಕವೃಂದದವರ ಸಹಕಾರದೊಂದಿಗೆ ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಯಿತು. 5-10ನೇ ತರಗತಿ ವಿದ್ಯಾರ್ಥಿಗಳು ಉತ್ಸಾಹದಿಂದ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.
ಶಾಲಾ ವಿದ್ಯಾರ್ಥಿ ಸಂಸತ್ತಿನ ಅಧ್ಯಕ್ಷೆಯಾಗಿ ಕುಮಾರಿ. ಸಮೀಕ್ಷಾ ರಾಯ್ಕರ್, ಉಪಾಧ್ಯಕ್ಷೆಯಾಗಿ ಕುಮಾರಿ ಅದಿತಿ ನಾಯ್ಕ, ಶಿಸ್ತಿನ ಮಂತ್ರಿಗಳಾಗಿ ವಿನಿತ್ ಹೆಗಡೆ, ಸಿಂಚನಾ ದೇವಾಡಿಗ, ಕ್ರೀಡಾ ಮಂತ್ರಿಗಳಾಗಿ ಶ್ರೀರಾಮ್ ನಾಗರಕಟ್ಟೆ, ತ್ವಿಷಾ ಹೆಗಡೆ ಸಾಂಸ್ಕೃತಿಕ ಮಂತ್ರಿಗಳಾಗಿ ಅವನಿ ಜಿ.ಭಟ್ಟ, ಚರಣ್ ಎಸ್ ತೊಗರಹಳ್ಳಿ, ಪ್ರಾರ್ಥನಾ ಮಂತ್ರಿಯಾಗಿ ಸಮೀಕ್ಷಾ ಎಸ್. ಗೌಡರ್ ಗ್ರಂಥಾಲಯ ಮಂತ್ರಿಗಳಾಗಿ ಆರ್ಯನ್ ಬೈಟ್ಕೋಲ್, ಅಂಶಿಕಾ ಎ.ಹೆಗಡೆ. ಸ್ವಚ್ಛತಾ ಮಂತ್ರಿಗಳಾಗಿ ಅಭಿನವ್ ಭಟ್, ಶ್ರದ್ಧಾ ಶೆಟ್ಟಿ ಆಯ್ಕೆಆಗಿರುತ್ತಾರೆ. ಮುಖ್ಯೋಪಾಧ್ಯಾಯರಾದ ಗಣಪತಿ ಗೌಡ ಇವರು ಎಲ್ಲಾ ವಿದ್ಯಾರ್ಥಿಗಳಿಗೂ ಶುಭ ಹಾರೈಸಿ,ಗೆದ್ದ ವಿದ್ಯಾರ್ಥಿಗಳಿಗೆ ಶಾಲಾ ನಿಯಮದ ಪ್ರಕಾರ ನಡೆಯುವಂತೆ ತಿಳುವಳಿಕೆ ಹೇಳಿದರು.