ಕಾರವಾರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ 2025-26 ನೇ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸ್ ವಿತರಣೆ ಪ್ರಾರಂಭವಾಗಿದ್ದು, ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಸಂರ್ಪೂಣವಾಗಿ ಗಣಕೀತೃತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಆನ್ಲೆನ್ ಕೆ-1, ಜಿ-1 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಒದಗಿಸಿರುವ SATS/PUE/UUCMS ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಸದರಿ ಸಂಖ್ಯೆಯನ್ನು ನಮೂದಿಸಿ ಪ್ರಯಾಣ ಮಾರ್ಗ ಮತ್ತು ಕೆ-1 ಕೇಂದ್ರವನ್ನು ಭರ್ತಿಮಾಡಿ ಅರ್ಜಿ ಸಲ್ಲಿಸುವುದು. SATS/PUE/UUCMS ಸಂಖ್ಯೆ ಹೊಂದಿರದ, ವಿದ್ಯಾರ್ಥಿಗಳು JPG/JPEG ಮಾದರಿಯಲ್ಲಿ ವಿದ್ಯಾ ಸಂಸ್ಥೆಯಲ್ಲಿ ಅಭ್ಯಸಿಸುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ದೃಢೀಕರಣ, ಭಾವಚಿತ್ರ ಮತ್ತು ವಿದ್ಯಾಸಂಸ್ಥೆಯಲ್ಲಿ ಶುಲ್ಕ ಪಾವತಿಸದ ರಶೀದಿ ಪ್ರತಿಗಳನ್ನು ಅಪಲೋಡ್ ಮಾಡಿ ಪ್ರಯಾಣ ಮಾರ್ಗ ಮತ್ತು ಕೆ-1 ಕೇಂದ್ರವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಿದ ನಂತರ ಸಂಬAಧಿಸಿದ ದೂರವಾಣಿಗೆ ಸಂದೇಶ ಸ್ವೀಕರಿಸಿದ ನಂತರ ಸಂಬಧಿಸಿದ ಕೆ-1 ಸೆಂಟರ್ ನಲ್ಲಿ ನಿಗದಿತ ಶುಲ್ಕ ಪಾವತಿಸಿ ಪಾಸ್ ಪಡೆಯಬಹುದು.
SATS/PUE/UUCMS ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದಾಖಲಿಸಿರುವ ವಾಸಸ್ಥಳ ವಿಳಾಸದಲ್ಲಿ ಬದಲಾವಣೆ ಇದ್ದಲ್ಲಿ SATS/PUE/UUCMS ತಂತ್ರಾಂಶದಲ್ಲಿ ವಿಳಾಸವನ್ನು ಅಪ್ಡೇಟ್ ಮಾಡಿ ನಂತರ ಸೇವ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವುದು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಆರ್ಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.
ಉತ್ತರ ಕನ್ನಡ ವಿಭಾಗದ ಸಿದ್ದಾಪುರ ತಾಲೂಕಿನ ಕರ್ನಾಟಕ ಒನ್ ಸುರೇಶ್ ಹೆಗಡೆ (Tel:+919448142941), ಯಲ್ಲಾಪುರ ಗಾಯಿತ್ರಿ ಶಂಕರ್ ನಾಯ್ಕ (Tel:+919482413627). ಅಂಕೋಲಾ ಶ್ರೀಧರ್ (Tel:+917019402109), ಮುಂಡಗೋಡ ವಿಶ್ವನಾಥ ಬಾಳಪ್ಪ ಕೇದರ್ (Tel:+919591274031), ಕಾರವಾರ ಪ್ರೇಮಾನಂದ ಸಾವಂತ್ (Tel:+917411025392), ಹೊನ್ನಾವರ ಶಿವನಂದ್ ಮೆಸ್ತಾ (Tel:+919535322023), ಭಟ್ಕಳ ಸುಬ್ರಮಣ್ಯ (Tel:+919481989974), ಕುಮಟಾ ಶಾಮಲಾ ಗೌಡ (Tel:+918867465621) ಶಿರಸಿ ನಿಂಗಪ್ಪ ಅರಸನಾಳ (Tel:+919880811814) ಈ 9 ಕರ್ನಾಟಕ ಒನ್ ಕೆಂದ್ರಗಳ ಮೂಲಕ ಪಾಸ್ ಪಡೆಯಬಹುದಾಗಿದೆ ಎಂದು ಶಿರಸಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ : ಅರ್ಜಿ ಆಹ್ವಾನ
