Slide
Slide
Slide
previous arrow
next arrow

ವಿದ್ಯಾರ್ಥಿಗಳಿಗೆ ರಿಯಾಯಿತಿ ಬಸ್ ಪಾಸ್ ವಿತರಣೆ : ಅರ್ಜಿ ಆಹ್ವಾನ

300x250 AD

ಕಾರವಾರ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ 2025-26 ನೇ ಸಾಲಿನ ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ ಪಾಸ್ ವಿತರಣೆ ಪ್ರಾರಂಭವಾಗಿದ್ದು, ವಿದ್ಯಾರ್ಥಿ ಬಸ್ ಪಾಸ್ ವಿತರಣೆಯನ್ನು ಸಂರ್ಪೂಣವಾಗಿ ಗಣಕೀತೃತಗೊಳಿಸಿರುವುದರಿಂದ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhu.karnataka.gov.in ಮೂಲಕ ಆನ್‌ಲೆನ್ ಕೆ-1, ಜಿ-1 ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆಯ ಒದಗಿಸಿರುವ SATS/PUE/UUCMS ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳು ಸದರಿ ಸಂಖ್ಯೆಯನ್ನು ನಮೂದಿಸಿ ಪ್ರಯಾಣ ಮಾರ್ಗ ಮತ್ತು ಕೆ-1 ಕೇಂದ್ರವನ್ನು ಭರ್ತಿಮಾಡಿ ಅರ್ಜಿ ಸಲ್ಲಿಸುವುದು. SATS/PUE/UUCMS ಸಂಖ್ಯೆ ಹೊಂದಿರದ, ವಿದ್ಯಾರ್ಥಿಗಳು JPG/JPEG ಮಾದರಿಯಲ್ಲಿ ವಿದ್ಯಾ ಸಂಸ್ಥೆಯಲ್ಲಿ ಅಭ್ಯಸಿಸುತ್ತಿರುವ ಬಗ್ಗೆ ನಿಗದಿತ ನಮೂನೆಯಲ್ಲಿ ದೃಢೀಕರಣ, ಭಾವಚಿತ್ರ ಮತ್ತು ವಿದ್ಯಾಸಂಸ್ಥೆಯಲ್ಲಿ ಶುಲ್ಕ ಪಾವತಿಸದ ರಶೀದಿ ಪ್ರತಿಗಳನ್ನು ಅಪಲೋಡ್ ಮಾಡಿ ಪ್ರಯಾಣ ಮಾರ್ಗ ಮತ್ತು ಕೆ-1 ಕೇಂದ್ರವನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸುವುದು. ಅರ್ಜಿ ಸಲ್ಲಿಸಿದ ನಂತರ ಸಂಬAಧಿಸಿದ ದೂರವಾಣಿಗೆ ಸಂದೇಶ ಸ್ವೀಕರಿಸಿದ ನಂತರ ಸಂಬಧಿಸಿದ ಕೆ-1 ಸೆಂಟರ್ ನಲ್ಲಿ ನಿಗದಿತ ಶುಲ್ಕ ಪಾವತಿಸಿ ಪಾಸ್ ಪಡೆಯಬಹುದು.
SATS/PUE/UUCMS ಸಂಖ್ಯೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ದಾಖಲಿಸಿರುವ ವಾಸಸ್ಥಳ ವಿಳಾಸದಲ್ಲಿ ಬದಲಾವಣೆ ಇದ್ದಲ್ಲಿ SATS/PUE/UUCMS ತಂತ್ರಾಂಶದಲ್ಲಿ ವಿಳಾಸವನ್ನು ಅಪ್‌ಡೇಟ್ ಮಾಡಿ ನಂತರ ಸೇವ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವುದು. ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳು ಆರ್‌ಡಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು.
ಉತ್ತರ ಕನ್ನಡ ವಿಭಾಗದ ಸಿದ್ದಾಪುರ ತಾಲೂಕಿನ ಕರ್ನಾಟಕ ಒನ್ ಸುರೇಶ್ ಹೆಗಡೆ (Tel:+919448142941), ಯಲ್ಲಾಪುರ ಗಾಯಿತ್ರಿ ಶಂಕರ್ ನಾಯ್ಕ (Tel:+919482413627). ಅಂಕೋಲಾ ಶ್ರೀಧರ್ (Tel:+917019402109), ಮುಂಡಗೋಡ ವಿಶ್ವನಾಥ ಬಾಳಪ್ಪ ಕೇದರ್ (Tel:+919591274031), ಕಾರವಾರ ಪ್ರೇಮಾನಂದ ಸಾವಂತ್ (Tel:+917411025392), ಹೊನ್ನಾವರ ಶಿವನಂದ್ ಮೆಸ್ತಾ (Tel:+919535322023), ಭಟ್ಕಳ ಸುಬ್ರಮಣ್ಯ (Tel:+919481989974), ಕುಮಟಾ ಶಾಮಲಾ ಗೌಡ (Tel:+918867465621) ಶಿರಸಿ ನಿಂಗಪ್ಪ ಅರಸನಾಳ (Tel:+919880811814) ಈ 9 ಕರ್ನಾಟಕ ಒನ್ ಕೆಂದ್ರಗಳ ಮೂಲಕ ಪಾಸ್ ಪಡೆಯಬಹುದಾಗಿದೆ ಎಂದು ಶಿರಸಿ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top