Slide
Slide
Slide
previous arrow
next arrow

ಹಿರಿಯ ವರ್ತಕ ದಿ. ಅನಂತ‌ ಶಾನಭಾಗ್‌ಗೆ ನುಡಿನಮನ ಕಾರ್ಯಕ್ರಮ

300x250 AD

ಸಿದ್ದಾಪುರ: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ವರ್ತಕರು ಹಾಗೂ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ 36ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅನಂತ ಮರ್ತು ಶಾನಭಾಗ ಅವರಿಗೆ ನುಡಿನಮನ ಕಾರ್ಯಕ್ರಮ ಹಾರ್ಸಿಕಟ್ಟಾ ಗಜಾನನನೋತ್ಸವ ಸಮಿತಿಯಲ್ಲಿ ಭಾನುವಾರ ನಡೆಯಿತು.

ಎಲ್ಲರ ಪ್ರೀತಿ, ವಿಶ್ವಾಸ, ನಂಬಿಕೆಗೆ ಪಾತ್ರರಾಗಿದ್ದ ಅನಂತ ಶಾನಭಾಗರು ಒಬ್ಬ ಸಂಘಟಕರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಆಪದ್ಬಾಂಧವರಾಗಿದ್ದರು ಎಂದು ನುಡಿನಮನ ಸಲ್ಲಿಸಿದ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ, ಪ್ರಮುಖರಾದ ಎಸ್.ಆರ್.ಹೆಗಡೆ ಕುಂಬಾರಕುಳಿ, ಡಾ.ನಂದಕುಮಾರ ಪೈ, ಡಾ.ಜಿ.ಎಂ.ಹೆಗಡೆ, ವಿ.ಸಿ.ಎಸ್.ಭಟ್ಟ ಗಾಳಿಮನೆ, ರವಿಂದ್ರ ಹೆಗಡೆ ಹಿರೇಕೈ, ಎಸ್.ಎನ್.ಹೆಗಡೆ ಬಕ್ಕೆಮನೆ, ಭಾಸ್ಕರ ಹೆಗಡೆ ಕೊಡ್ಗಿಬೈಲ್,ಗಣೇಶ ಹೇರೂರು,ಶ್ರೀಕಾಂತ ಹೆಗಡೆ ಶಿರಸಿ, ಸಿ.ಎನ್.ಹೆಗಡೆ ಹೊನ್ನೆಹದ್ದ, ಪಿ.ವಿ.ಹೆಗಡೆ ಹೊಸಗದ್ದೆ, ಸತೀಶ ಹೆಗಡೆ ದಂಟಕಲ್, ಎಸ್.ಎಂ.ಹೆಗಡೆ ಪೆಟೇಸರ, ಶಶಿಧರ ಗೌಡರ್, ಎಂ.ಆರ್.ಭಟ್ಟ ಸಿದ್ದಾಪುರ, ಅನಂತ ಹೆಗಡೆ ಗೊಂಟನಾಳ, ಶ್ರೀಕಾಂತ ಶಾನಭಾಗ, ಗಣಪತಿ ಹೆಗಡೆ ವಡ್ಡಿನಗದ್ದೆ ,ಎನ್.ಜಿ.ಹೆಗಡೆ ಓಜಗಾರ, ನರಹರಿ ಹೆಗಡೆ ಸಿದ್ದಾಪುರ, ಮಂಜುನಾಥ ಮಡಿವಾಳ, ಕೃಷ್ಣಾ ಬಾಯಿ ಶಾನಭಾಗ ಸೇರಿದಂತೆ ಹಲವರು ನುಡಿನಮನ ಸಲ್ಲಿಸಿದರು.
ನರಹರಿ ಹೆಗಡೆ ಕರ್ಕಿಸವಲ್, ಡಾ.ರವೀಂದ್ರ ಹೆಗಡೆ ಹೊಂಡಗಾಶಿ,ಜಿ.ಎಸ್.ಹೆಗಡೆ ಕರ್ಕಿಸವಲ್, ರಾಮಚಂದ್ರ ಹೆಗಡೆ ಹುಲಿಮನೆ, ಗಜಾನನೋತ್ಸವ ಸಮಿತಿಯ ಸದಸ್ಯರುಗಳು, ಅನಂತ ಶಾನಭಾಗ ಅವರ ಅಭಿಮಾನಿಗಳು, ಹಿತೈಷಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪೂರ್ವದಲ್ಲಿ ಒಂದು ನಿಮಿಷ ಮೌನಾಚರಣೆ ನಡೆಸಿ ಅನಂತ ಶಾನಭಾಗ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ರಮೇಶ ಹೆಗಡೆ ಹಾರ್ಸಿಮನೆ, ಲೋಕೇಶ ಹೆಗಡೆ ವಡಗೆರೆ ಕಾರ್ಯಕ್ರಮ ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top