ಶಿರಸಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತೀವ್ರವಾಗುವ ಸಂಭವವಿದ್ದು ಜಿಲ್ಲೆಗೆ ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದಾಗಿದೆ. ಜಿಲ್ಲೆಯಲ್ಲಿ ಕಾರವಾರ ಅತಿ ಸೂಕ್ಷ್ಮವಾದ ಪ್ರದೇಶ ಆಗಿರುವುದರಿಂದ ಯಾವುದೇ ತರಹದ ತೊಂದರೆ ಉಂಟಾದರೆ ಭಜರಂಗದಳ ಕಾರ್ಯಕರ್ತರು ಜಿಲ್ಲಾಡಳಿತದೊಂದಿಗೆ ಸ್ವಯಂಸೇವಕರಾಗಿ ಕೆಲಸ ಮಾಡಲು ಯಾವುದೇ ಸಮಯದಲ್ಲಿ ಮುಂದಾಗಿದ್ದೇವೆ ಎಂದು ಭಜರಂಗದಳದ ವಿಭಾಗದ ಸಂಯೋಜಕ ಅಮಿತ್ ಶೇಟ್ ತಿಳಿಸಿದ್ದಾರೆ. ಭಜರಂಗದಳ ಕಾರ್ಯಕರ್ತರಿಗೆ ಒಂದೇ ಒಂದು ಕರೆ ಕೊಟ್ಟರೆ, ನೂರಾರು ಕಾರ್ಯಕರ್ತರು ದೇಶ ಸೇವೆಗೋಸ್ಕರ ಮುಂದೆ ಬಂದು ನಿಲ್ಲುತ್ತೇವೆಂದು ಹೇಳಿದ್ದಾರೆ.
ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಲು ಸಿದ್ದ: ಅಮಿತ್ ಶೇಟ್
