Slide
Slide
Slide
previous arrow
next arrow

ಯುವತಿ ಕಾಣೆ: ದೂರು ದಾಖಲು

300x250 AD

ಜೊಯಿಡಾ: ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ರಾಮನಗರದ ವಿನಯಾ ಸುಧೀರ್ (23) ಕಾಣೆಯಾಗಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅವರು ಬೆಂಗಳೂರಿನಲ್ಲಿ ಕಂಪನಿಯ ಉದ್ಯೋಗದಲ್ಲಿದ್ದರು. ದಸರಾ ಹಬ್ಬ ಹಾಗೂ ಅನಾರೋಗ್ಯದ ಕಾರಣ ಅ.6ರಂದು ರಾತ್ರಿ ಜೊಯಿಡಾದ ಬಸ್ಸು ಹತ್ತಿದ್ದು, ನಂತರ ವಿನಯಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ವೇಳೆ ವಿನಯಾ ಅವರ ತಂದೆ ವಿಶ್ವನಾಥ ಸುಧೀರ್ ವಿನಯಾ ಅವರ ಸ್ನೇಹಿತೆ ಸೋನಿಯಾ’ಗೆ ಕರೆ ಮಾಡಿ ವಿಚಾರಿಸಿದ್ದು, ವಿನಯಾ ನಿನ್ನೆ ರಾತ್ರಿಯೇ ಊರಿನ ಬಸ್ಸು ಹತ್ತಿರುವುದಾಗಿ ಸೋನಿಯಾ ಹೇಳಿದ್ದಾರೆ. ಕೊನೆಯದಾಗಿ ಮಾತನಾಡಿದ ವಿನಯಾ ಅ.7ರ ಬೆಳಗ್ಗೆ ರಾಮನಗರಕ್ಕೆ ಬರುವುದಾಗಿ ಹೇಳಿದ್ದು, ವಿನಯಾರನ್ನು ಮನೆಗೆ ಕರೆತರಲು ಹೋದ ಅವರ ತಂದೆಗೆ ಆಕೆ ಸಿಕ್ಕಿಲ್ಲ. ರಾಮನಗರದ ಸಂಬoಧಿಕರ ಮನೆಯಲ್ಲಿ ಹುಡುಕಿದರೂ ಪತ್ತೆಯಾಗಿಲ್ಲ.
ಈ ಹಿನ್ನಲೆ ಮಗಳನ್ನು ಹುಡುಕಿಕೊಡಿ ಎಂದು ವಿಶ್ವನಾಥ್ ಸುಧೀರ್ ಅವರು ಪೊಲೀಸರ ಮೊರೆ ಹೋಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top