Slide
Slide
Slide
previous arrow
next arrow

ಬ್ರಹ್ಮಾನಂದ ಶ್ರೀ ದರ್ಶನ ಪಡೆದ ಸಿದ್ದಾಪುರ ನಾಮಧಾರಿ ಸಮಾಜ

300x250 AD

ಸಿದ್ದಾಪುರ: ಭಟ್ಕಳದ ಕರಿಕಲ್ ಶಾಖಾ ಮಠದಲ್ಲಿ ಚಾತುರ್ಮಾಸ್ಯ ವ್ರತವನ್ನು ಕೈಗೊಂಡಿರುವ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶ್ವರರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದರ್ಶನವನ್ನು ತಾಲೂಕಿನ ನಾಮಧಾರಿ ಸಮಾಜದ ಶಿಷ್ಯವೃಂದದವರು ಪಡೆದುಕೊಂಡರು. ಚಾತುರ್ಮಾಸ್ಯ ವ್ರತದ 39ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಭಕ್ತರು ಗುರುಗಳ ದರ್ಶನ ಪಡೆದು, ಗುರುಕಾಣಿಕೆ ಸಲ್ಲಿಸಿದರು.

ತಾಲೂಕಾ ನಾಮಧಾರಿ ಸಮಾಜದ ಪರವಾಗಿ ಶಕುಂತಲಾ ಮತ್ತು ನಾಗರಾಜ ನಾಯ್ಕ ಮಾಳ್ಕೋಡ ದಂಪತಿಗಳು ಪಾದಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕಾ ನಾಮಧಾರಿ ಸಮಾಜದ ಅಭಿವೃದ್ಧಿ ಸಂಘದ ಗೌರವ ಅಧ್ಯಕ್ಷರಾದ ಆನಂದ ಈರಾ ನಾಯ್ಕ, ಅಧ್ಯಕ್ಷರಾದ ಕೆ.ಜಿ. ನಾಯ್ಕ ಹಣಜೀಬೈಲ, ಉಪಾಧ್ಯಕ್ಷರಾದ ಕೆ.ಜಿ. ನಾಗರಾಜ, ಶ್ರೀರಾಮ ಕ್ಷೇತ್ರದ ಸೇವಾ ಸಮಿತಿಯ ತಾಲೂಕಾಧ್ಯಕ್ಷರಾದ ವಿ.ಎನ್. ನಾಯ್ಕ ಬೇಡ್ಕಣಿ, ಕಾರ್ಯದರ್ಶಿ ನಾಗಪತಿ ನಾಯ್ಕ ಹರಕನಳ್ಳಿ, ನಾಮಧಾರಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಎಂ. ನಾಯ್ಕ ಹೊಸೂರು, ಪದಾಧಿಕಾರಿಗಳಾದ ಮಾಬ್ಲೇಶ್ವರ ನಾಯ್ಕ ಕರಮನೆ, ಗಜಾನನ ನಾಯ್ಕ ಬಿಳಗಿ, ಕೆ.ಆರ್. ವಿನಾಯಕ, ಧನಂಜಯ ನಾಯ್ಕ, ಚಂದ್ರಹಾಸ ನಾಯ್ಕ ಕೊಂಡ್ಲಿ, ಪ್ರಮುಖರಾದ ವಸಂತ ನಾಯ್ಕ ಮನ್ಮನೆ, ರಾಮಕೃಷ್ಣ ನಾಯ್ಕ ಶಿರೂರು, ಮಂಜುನಾಥ ನಾಯ್ಕ ತ್ಯಾರ್ಸಿ, ಬಿ.ಆರ್. ನಾಯ್ಕ ಕ್ಯಾದಗಿ, ಮಾರುತಿ ನಾಯ್ಕ ಸುಂಕತ್ತಿ, ಸಂಜಯ ನಾಯ್ಕ ಅವರಗುಪ್ಪ, ಕೇಶವ ನಾಯ್ಕ ಕುಣಜಿ, ಸುರೇಶ ಟಿ. ನಾಯ್ಕ ಸಿದ್ದಾಪುರ, ಹರೀಶ ಜಿ. ನಾಯ್ಕ ಕೋಲಸಿರ್ಸಿ, ವಿವೇಕ ನಾಯ್ಕ ಅವರಗುಪ್ಪ, ಸುಭಾಶ್ಚಂದ್ರ ನಾಯ್ಕ, ಬಿ.ಡಿ. ನಾಯ್ಕ ಮೊದಲಾದವರು ಇದ್ದು ದರ್ಶನ ಪಡೆದರು.

300x250 AD
Share This
300x250 AD
300x250 AD
300x250 AD
Back to top