Slide
Slide
Slide
previous arrow
next arrow

ಇಂದು ಅಭಾಸಾಪ ಪದಾಧಿಕಾರಿಗಳ ಪದಗ್ರಹಣ: ಭಜನಾ ಕಾರ್ಯಕ್ರಮ

300x250 AD

ಸಿದ್ದಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಶಿರಸಿ ಜಿಲ್ಲೆಯ ಸಿದ್ದಾಪುರ ತಾಲೂಕು ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಶ್ರೀರಾಮ ಭಜನಾ ಕಾರ್ಯಕ್ರಮ ಇಂದು ಆ.31ರಂದು ಸಂಜೆ 4.15ಕ್ಕೆ ಪಟ್ಟಣದ ಶ್ರೀ ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಶಿರಸಿ ಜಿಲ್ಲೆ ಅಧ್ಯಕ್ಷ ಗಂಗಾಧರ ಕೊಳಗಿ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಸ್ಥಳೀಯ ಜಿ.ಎಸ್.ಬಿ.ಸಮಾಜದ ಅಧ್ಯಕ್ಷ ಜಯವಂತ ಪದ್ಮನಾಭ ಶಾನಭಾಗ ಪಾಲ್ಗೊಳ್ಳುವರು. ವಿಶೇಷ ಆಮಂತ್ರಿತರಾಗಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನರೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ, ರಾಜ್ಯ ಸಮಿತಿ ಆಮಂತ್ರಿತ ಸದಸ್ಯರಾದ ಜಗದೀಶ ಭಂಡಾರಿ ಆಗಮಿಸುವರು.

300x250 AD

ತಾಲೂಕು ಸಮಿತಿ ಅಧ್ಯಕ್ಷರಾಗಿ ಆರ್.ಎನ್.ಹಳಕಾರ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ ಬೇಂಗ್ರೆ,ವೀಣಾ ಆನಂದ ಶೇಟ್(ಸಹಕಾರ್ಯದರ್ಶಿ), ಕುಮಾರ ಪೋಕಳೆ, ದಿವಾಕರ ನಾಯ್ಕ ಹೆಮ್ಮನಬೈಲ(ಸಂಘಟನಾ ಕಾರ್ಯದರ್ಶಿಗಳು), ನಿತಿನ್‌ಕುಮಾರ ಭಟ್ಟಿ(ಖಜಾಂಚಿ),ಗಣಪತಿ ರಾ.ಭಟ್ಟ,ಸಂತೋಷ ಎಸ್.ಹುಲೇಕಲ್( ಮಾಧ್ಯಮ ಪ್ರಮುಖರು), ಜ್ಯೋತಿ ವಿಜಯ ಹೆಗಡೆ(ಮಹಿಳಾ ಪ್ರಮುಖರು), ವಿ|ಮಹಾಬಲೇಶ್ವರ ಭಟ್ಟ, ಈಶ್ವರ ಕನ್ನಾ ನಾಯ್ಕ ನಾಗರಕಟ್ಟೆ, ಮಂಜುನಾಥ ನಾಯ್ಕ ಯೋಗ ಶಿಕ್ಷಕರು, ಶ್ರೀಪಾದ ಹೆಗಡೆ ಸಿದ್ದಾಪುರ ಇವರುಗಳು ಪದಗ್ರಹಣದಲ್ಲಿ ಪಾಲ್ಗೊಳ್ಳುವರು. ನಂತರ ದೈವಜ್ಞ ಬ್ರಾಹ್ಮಣ ಸಮಾಜದ ಮಹಿಳಾ ಭಜನಾತಂಡ, ಶ್ರೀ ಲಕ್ಷ್ಮಿವೆಂಕಟೇಶ ದೇವಾಲಯದ ಭಜನಾ ತಂಡ, ಶ್ರೀ ವಿಠ್ಠಲ ದೇವಾಲಯದ ಭಜನಾ ತಂಡಗಳಿಂದ ಶ್ರೀರಾಮ ಭಜನಾ ಕಾರ್ಯಕ್ರಮ ಜರುಗುವದು.

Share This
300x250 AD
300x250 AD
300x250 AD
Back to top