Slide
Slide
Slide
previous arrow
next arrow

ನಾಗಚೌಡೇಶ್ವರಿ ದೇವಿಯ ಒಡವೆ ಕಳ್ಳತನ

300x250 AD

ಕಾರವಾರ: ಕಾಜುಭಾಗ ನಾಗಚೌಡೇಶ್ವರಿ ದೇವಿಯ ಎರಡು ಕಣ್ಣುಗಳು ಕಳ್ಳರ ಪಾಲಾಗಿದೆ.
ಆ.27ರ ರಾತ್ರಿ ದೇವಾಲಯದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬಂಗಾರದ ಕಣ್ಣುಗಳನ್ನು ಅಪಹರಿಸಿದ್ದಾರೆ. ಇದರೊಂದಿಗೆ ಬಂಗಾರದ ತಿಲಕ, ಕರಿಮಣಿ ಸರ, ಕಿವಿ ಓಲೆಯೂ ಸಹ ಕಳ್ಳರ ಪಾಲಾಗಿದ್ದು, ಆ.28ರ ಬೆಳಗ್ಗೆ ದೇವಾಲಯಕ್ಕೆ ಬಂದವರಿಗೆ ಈ ಕಳ್ಳತನದ ಬಗ್ಗೆ ಅರಿವಾಗಿದೆ.
ತಕ್ಷಣ ಸಮಿತಿಯವರು ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ. ದೇವಾಲಯ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳತನವಾದ ವಸ್ತುಗಳ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಸುಳಿವು ಸಿಗದ ಕಾರಣ ತೆರಿಗೆ ಸಲಹಗಾರರು ಆಗಿರುವ ದೇವಾಲಯದ ಮುಖ್ಯಸ್ಥ ಸತೀಶ ಗಿರಿಧರ ನಾಯ್ಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top