Slide
Slide
Slide
previous arrow
next arrow

ಇಂದು ಎಸ್ಎಸ್ಎಲ್‌ಸಿಯಲ್ಲಿ ಸಾಧನೆಗೈದ ಶಾಲೆಗಳಿಗೆ ಸನ್ಮಾನ

300x250 AD

ಶಿರಸಿ: ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಹಾಗೂ ಶಿಕ್ಷಕೇತರ ಒಕ್ಕೂಟ ರಿ., ಮತ್ತು ಇಕ್ರಾ ಎಜ್ಯುಕೇಷನ್ ಟ್ರಸ್ಟ್, ಇವರ ಸಂಯುಕ್ತ ಆಶ್ರಯದಲ್ಲಿ ಕಳೆದ ಮಾರ್ಚ/ಎಪ್ರಿಲ್ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ಪಡೆದ ಅನುದಾನ ರಹಿತ ಶಾಲೆಗಳಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಇಂದು ಆ.4ರಂದು ಬೆಳಗ್ಗೆ 10.30 ಘಂಟೆಗೆ ಇಕ್ರಾ ಪ್ರೌಢಶಾಲೆ ಶಿರಸಿಯಲ್ಲಿ ಏರ್ಪಡಿಸಲಾಗಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಅನಂತಮೂರ್ತಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಅನಂತಮೂರ್ತಿ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ, ಆಗಮಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕ್ರಾ ಎಜ್ಯುಕೇಶನ್ ಟ್ರಸ್ಟ್,ಅಧ್ಯಕ್ಷ ಅಬ್ದುಲ್ ಖುದಾಸ್ ಹಸನಸಾಬ್ ಇವರು ವಹಿಸಲಿದ್ದಾರೆ. ಇಕ್ರಾ ಎಜ್ಯುಕೇಶನ್ ಟ್ರಸ್ಟ್, ಶಿರಸಿಯ ಕಾರ್ಯದರ್ಶಿಗಳಾದ ಅಬ್ಬಾಸ್ ತೋನ್ಸೆ, ಹೊನ್ನಾವರ ಹಿರಿಯ ಕಾಂಗ್ರೆಸ್ ಮುಖಂಡರಾದ ಬಾಲಚಂದ್ರ ನಾಯ್ಕ, ಯುಥ್ ಕಾಂಗ್ರೆಸ್ ಉತ್ತರಕನ್ನಡ ಅಧ್ಯಕ್ಷರಾದ ಸಂತೋಷ ಶೆಟ್ಟಿ, ಬಿಜೆಪಿ ಮುಖಂಡರಾದ ವಿಶಾಲ ಮರಾಠೆ, ಕ.ರಾ.ಖಾ.ಶಾ.ಶಿ.ಹಾ.ಶಿ. ಒಕ್ಕೂಟ, ಶಿರಸಿ ಇದರ ರಾಜ್ಯ ಅಧ್ಯಕ್ಷರಾದ ಶ್ರೀಮತಿ ಸುನೀತಾ ನಾಯ್ಕ ಹಾಗೂ ಕ.ರಾ.ಖಾ.ಶಾ.ಶಿ.ಹಾ.ಶಿ. ಒಕ್ಕೂಟ, ಶಿರಸಿ ಇದರ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಶಾಹಿದಾ ಅಂಕೋಲಾ ಇವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಿಲ್ಲಾ ಪದಾಧಿಕಾರಿಗಳು, ಶಿರಸಿ ಶೈಕ್ಷಣಿಕ ಜಿಲ್ಲಾ ಘಟಕ, ಕ.ರಾ.ಖಾ.ಶಾ.ಶಿ.ಹಾ.ಶಿ.ಒಕ್ಕೂಟ ರಿ. ಶಿರಸಿ ಇವರು ಸರ್ವರಿಗೆ ಆದರದ ಆಮಂತ್ರಣ ಕೋರಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top