Slide
Slide
Slide
previous arrow
next arrow

ಜೂ.23ಕ್ಕೆ ರಾಜ್ಯಮಟ್ಟದ ಪರಿಸರ ಸಮ್ಮೇಳನ

300x250 AD

ಶಿರಸಿ: ಇಲ್ಲಿನ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜೂ.23,ರವಿವಾರ ವೃಕ್ಷಲಕ್ಷ ಆಂದೋಲನವು, ಒಂದು ದಿನದ ರಾಜ್ಯಮಟ್ಟದ ಪರಿಸರ ಸಮ್ಮೇಳನವನ್ನು ಆಯೋಜಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಅಂದು ಬೆಳಗ್ಗೆ 10 ಗಂಟೆಗೆ ಜರುಗಲಿದೆ.

 ಕಾರ್ಯಕ್ರಮದಲ್ಲಿ ಅನಂತ ಹೆಗಡೆ ಅಶೀಸರ ಅವರಿಗೆ ವಿಶೇಷ ನಾಗರಿಕ ಸನ್ಮಾನ, ಅನಂತ ಹೆಗಡೆ ಅಶೀಸರ ಅವರ ಆಭಿನಂದನಾ ಗ್ರಂಥ “ವೃಕ್ಷಮಿತ್ರ” ಪುಸ್ತಕದ ಬಿಡುಗಡೆ, ಡಾ. ಪ್ರಕಾಶ ಮೇಸ್ತ ಅವರಿಗೆ “ವೃಕ್ಷಲಕ್ಷ ಪ್ರಶಸ್ತಿ”  ಪ್ರದಾನ‌ ನಡೆಯಲಿದೆ.

300x250 AD

ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರು, ಡಾ. ಬಿ. ಎನ್ ಗಂಗಾಧರ್,ಡಾ. ಚಮೂ ಕೃಷ್ಣಾಶಾಸ್ತ್ರಿ, ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್, ನಾಗೇಶ ಹೆಗಡೆ,ಡಾ. ಟಿ.ವಿ. ರಾಮಚಂದ್ರ, ಡಾ. ವಾಮನ ಆಚಾರ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸರ್ವರೂ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ.

Share This
300x250 AD
300x250 AD
300x250 AD
Back to top