Slide
Slide
Slide
previous arrow
next arrow

ಶಿರಸಿಯ ರಾಜದೀಪ ಸೌಹಾರ್ದ ಸಂಸ್ಥೆ ಮೇಲೆ ಐಟಿ ದಾಳಿ

300x250 AD

ಶಿರಸಿ: ಇಲ್ಲಿನ ಸೌಹಾರ್ದ ಸಹಕಾರಿ ಸಂಸ್ಥೆಯಾಗಿರುವ ರಾಜದೀಪ ಸೌಹಾರ್ದ ಸಂಸ್ಥೆ ಮೇಲೆ ಶನಿವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂಬ ಮಾಹಿತಿ ದೊರೆತಿದೆ. ಖ್ಯಾತ ಉದ್ಯಮಿ, ಕಾಂಗ್ರೆಸ್ ಮುಖಂಡ ದೀಪಕ್ ದೊಡ್ಡೂರು ಅಧ್ಯಕ್ಷರಾಗಿರುವ ಈ ಸೌಹಾರ್ದ ಸಂಸ್ಥೆಯನ್ನು ಗುರಿಯನ್ನಾಗಿಸಿಕೊಂಡು ಐಟಿ ದಾಳಿ ನಡೆದಿದೆ.‌

ಕೆಲ ದಿನಗಳ ಹಿಂದಷ್ಟೇ ಆದಾಯ ತೆರಿಗೆ ಅಧಿಕಾರಿಗಳು ಉದ್ಯಮಿ ದೀಪಕ್ ದೊಡ್ಡೂರು ಸೇರಿದಂತೆ ಅನೇಕರ ಮನೆ ಮೇಲೆ ದಾಳಿ ನಡೆಸಿದ್ದವು. ಆದರೆ ಆ ಸಮಯದಲ್ಲಿ ಯಾರ ಮನೆಯಲ್ಲಿಯೂ ಯಾವುದೇ ಗುರುತರವಾದ ದಾಖಲೆ, ಅಕ್ರಮ ಹಣ ಸಿಗದೇ ಬರಿಗೈಲಿ ವಾಪಾಸಾಗಿದ್ದರು ಎನ್ನಲಾಗಿತ್ತು. ಇದೀಗ ಮತ್ತೆ ಈ ಸಂಸ್ಥೆ ಮೇಲೆ ದಾಳಿ ನಡೆದಿದ್ದು, ಸಂಸ್ಥೆಯು ಆರಂಭವಾಗಿ ಕೇವಲ ಎರಡು ವರ್ಷಗಳಾಗಿದೆ.

300x250 AD
Share This
300x250 AD
300x250 AD
300x250 AD
Back to top