ಹೊನ್ನಾವರ : ಅಂಕ ಗಳಿಕೆ ನಿಮ್ಮ ಪ್ರಯತ್ನ ಫಲ, ಮಾನವೀಯ ಹೃದಯವಂತರಾಗಿ ಬಾಳುವುದು ಶ್ರೇಷ್ಠ ಬದುಕು, ತಂದೆ ತಾಯಿ ಹಾಗೂ ಸಮಾಜಕ್ಕೆ ಬೇಕಾದವರಾದಾಗ ಸಾರ್ಥಕ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ. ಖೈರನ್ ಹೇಳಿದರು.
ಅವರು ರವಿವಾರ ಸಂಜೆ ಕೆಳಗಿನೂರು ಗ್ರಾ. ಪಂ. ವ್ಯಾಪ್ತಿಯ ಎಸ್.ಎಸ್.ಎಲ್.ಸಿ. ಯಲ್ಲಿ ಶೇಕಡಾ 85ಕ್ಕೂ ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆಳಗಿನೂರು ಗ್ರಾ. ಪಂ. ಅಧ್ಯಕ್ಷೆ ಶ್ರೀಮತಿ ಚಿತ್ರಾಕ್ಷಿ ಗೌಡ ಮಾತನಾಡಿ ನಮ್ಮ ಮಕ್ಕಳಿಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಏರ್ಪಡಿಸಿದ ಈ ಕಾರ್ಯಕ್ರಮ ಅತ್ಯಂತ ಮಹತ್ವದ್ದು ಇದರಿಂದ ಸಮಾಜದಲ್ಲಿ ಸಾಧಕರು ರೂಪುಗೊಳ್ಳುತ್ತಾರೆ ಎಂದರು. ಅತಿಥಿಗಳಾದ ನಿವೃತ್ತ ಸಹಾಯಕ ಅಭಿಯಂತರ ಎಂ. ವಿ. ಹೆಗಡೆ ಮಾತನಾಡಿ ಕೃಷ್ಟ ಎಂದು ಕುಳಿತರೆ ಸಾಧನೆ ಅಸಾಧ್ಯ ಗೆಲುವಿಗೆ ಪ್ರಯತ್ನವೇ ಅಸ್ತ್ರ ಎಂದರು. 85ಕ್ಕೂ ಮೇಲ್ಪಟ್ಟು ಅಂಕ ಪಡೆದ 18ಮಕ್ಕಳಿಗೆ ಹಾಗೂ ಪಿ.ಯು.ಸಿ.ಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದ ವಿಜೇತ ಗೌಡರಿಗೆ ಅಭಿನಂದಿಸಲಾಯಿತು.
ಕ್ಷೇತ್ರ ಸಮನ್ವಯಾಧಿಕಾರಿ ವಿನಾಯಕ ಅವಧಾನಿ ಸಾಧಕರನ್ನು ಅಭಿನಂದಿಸಿದರು, ಮುಖ್ಯಾಧ್ಯಾಪಕಿ ಟ್ರೀಜಾ ಹೊಟಾ೯ ಮಾತನಾಡಿದರು. ಗ್ರಾ. ಪಂ. ಸದಸ್ಯೆ ಭಾರತಿ ನಾಯ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ದಾಮೋದರ ದೇವಾಡಿಗ, ಎಂ.ಎಸ್.ಹೆಗಡೆ, ಎಂ ಎಚ್.ನಾಯ್ಕ, ಎನ್.ಟಿ.ಗೌಡ, ಮಂಜುನಾಥ ಗೌಡ ಕರವೇ, ಹನುಮಂತ ಗೌಡ, ಗೋವಿಂದ ಗೌಡ, ನಾಗರಾಜ್ ಗೌಡ, ಜಿ.ಕೆ.ಗೌಡ ಹೀಗೆ ಹಲವಾರು ಶಿಕ್ಷಣ ಪ್ರೇಮಿಗಳು ಹಾಜರಿದ್ದರು. ಎಲ್.ಎಂ.ಹೆಗಡೆ ಸ್ವಾಗತಿಸಿದರು, ಎಸ್. ಎಚ್. ಗೌಡ ಪ್ರಾಸ್ತಾವಿಕ ಮಾತನಾಡಿದರು. ಜಿ. ಜಿ. ಹೆಗಡೆ ಪ್ರಾಥ೯ನೆ ಮಾಡಿದರು. ಅನಂತ ಹಸ್ಲರ ವಂದಿಸಿದರು. ಸತ್ಯನಾರಾಯಣ ನಿರೂಪಣೆ ಮಾಡಿದರು.