Slide
Slide
Slide
previous arrow
next arrow

ಜೂ.16 ರಂದು ಪಿಂಚಣಿ ಅದಾಲತ್

300x250 AD

ಕಾರವಾರ: ಶಿರಸಿ ವಿಭಾಗದ ಅಂಚೆ ಪಿಂಚಣಿ ಅದಾಲತ್‌ನ್ನು ಜೂ.16 ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ವಿಭಾಗಿಯ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿರಸಿ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಪಿಂಚಣಿದಾರರ ಕುಂದು ಕೊರತೆಗಳನ್ನು ಅದಾಲತ್‌ನಲ್ಲಿ ಚರ್ಚಿಸಲಾಗುವುದು. ಅದಾಲತ್‌ನಲ್ಲಿ ಅಂಚೆ ಕಚೇರಿ ಮೂಲಕ ಪಿಂಚಣಿ ಪಡೆಯುತ್ತಿರುವ ಇತರ ವರ್ಗದ ಪಿಂಚಣಿದಾರಿಗೆ ಭಾಗವಹಿಸಲು ಅವಕಾಶವಿರುವುದಿಲ್ಲ. ಅದಾಲತ್‌ನಲ್ಲಿ ಭಾಗವಹಿಸುವವರಿಗೆ ಯಾವುದೇ ಭತ್ಯ ಅನುಮತಿಸಲಾಗುವುದಿಲ್ಲ. ಅದಾಲತ್‌ಗೆ ಸಂಬAಧಪಟ್ಟ ಹಾಗೆ ಯಾರಾದರೂ ದೂರುಗಳನ್ನು ಹೊಂದಿದ್ದರೆ ಜೂ.13 ರೊಳಗಾಗಿ ಅಂಚೆ ಅಥವಾ ಇಮೇಲ್ dosirsi.ka@indiapost.gov.in ಮೂಲಕ ಕಳುಹಿಸಬಹುದು ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top