ಶಿರಸಿ: ಇತ್ತೀಚಿಗೆ ರಚನೆಗೊಂಡ ನಿವೃತ್ತ ಹಿರಿಯ ನಾಗರಿಕರ ಸಂಘಟನೆ “ಹಿನಾಸಂ” ತನ್ನ ಕಾರ್ಯಸೂಚಿಯಂತೆ,ಸದಸ್ಯರಿಗೆ ಪರಿಸರ ಅಧ್ಯಯನ ಪ್ರವಾಸವೊಂದನ್ನು ಮಾರ್ಚ 11, ಮಂಗಳವಾರದಂದು ಆಯೋಜಿಸಿದೆ.ಸಿದ್ದಾಪುರದ ಗೋ ಸ್ವರ್ಗ, ಸಿಗಂದೂರಿನ ಚೌಡೇಶ್ವರಿ ಮಂದಿರ. ಮತ್ತು ವರದಳ್ಳಿಯ ಭಗವಾನ್ ಶ್ರೀಧರಾಶ್ರಮ ಗಳನ್ನೊಳಗಂಡ ಒಂದು ದಿನದ ಈ ಪ್ರವಾಸ ಕಾರ್ಯಕ್ರಮ ಸದಸ್ಯರಲ್ಲಿ ಹೊಸ ಚೇತನ,ಉತ್ಸಾಹ ಉಂಟುಮಾಡಲಿ ಎಂಬುದು ಆಯೋಜಕರ ಅಪೇಕ್ಷೆ ಯಾಗಿದೆ ಎಂದು ತಿಳಿಸಲಾಗಿದೆ.
ಹಿನಾಸಂನಿಂದ ಅಧ್ಯಯನ ಪ್ರವಾಸ
