Slide
Slide
Slide
previous arrow
next arrow

ಅರಣ್ಯ ಜಾಗ ಅತಿಕ್ರಮಣ: ಖುಲ್ಲಾಪಡಿಸಲು ಹಿಂದೂ ಸಂಘಟನೆಯಿಂದ ಆಗ್ರಹ

300x250 AD

ಭಟ್ಕಳ: ತಾಲೂಕಿನ ಹೆಬ್ಳೆ ಪಂಚಾಯತ ವ್ಯಾಪ್ತಿಯ ಕುಕನೀರ ಗ್ರಾಮದ ಮಧ್ಯದಲ್ಲಿ ಅರಣ್ಯ ಜಾಗ ಅತಿಕ್ರಮಿಸಿರುವುದಕ್ಕೆ ಸ್ಥಳೀಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಘಟನೆಗಳ ಮುಖಂಡರೊಂದಿಗೆ ವಲಯ ಅರಣ್ಯಾಧಿಕಾರಿ ಅವರನ್ನು ಭೇಟಿಯಾದ ಗ್ರಾಮಸ್ಥರ ನಿಯೋಗ, ಅತಿಕ್ರಮಿತ ಜಾಗ ಖುಲ್ಲಾಪಡಿಸುವಂತೆ ಒತ್ತಾಯಿಸಿದರು. ಅಲ್ಲಿರುವ ಜಾಗದ ಸುತ್ತಲೂ ಗಿಡಗಳನ್ನು ನೆಟ್ಟು, ಜಾಗಕ್ಕೆ ತಂತಿ ಬೇಲಿ ಹಾಕಬೇಕೆಂದು ಆಗ್ರಹಿಸಿದರು. ಗ್ರಾಮಸ್ಥರ ಅಹವಾಲು ಆಲಿಸಿದ ವಲಯಾರಣ್ಯಾಧಿಕಾರಿ ಒಂದು ದಿನದೊಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಮಯದಲ್ಲಿ ಹಿಂದೂ ಸಮಾಜದ ಮುಖಂಡ ಕೃಷ್ಣ ನಾಯ್ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಹಿಂದುಳಿದ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮಾಹಿತಿ ಹಕ್ಕು ಹೋರಾಟಗಾರ ನಾಗೇಶ ನಾಯ್ಕ ಕುಕನೀರ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top