Slide
Slide
Slide
previous arrow
next arrow

ಗ್ರಾಪಂ.ಸದಸ್ಯರ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ನವೀನ್ ಶೆಟ್ಟಿ ಆಯ್ಕೆ

300x250 AD

ಶಿರಸಿ : ತಾಲೂಕಿನ ಪಶ್ಚಿಮ ಭಾಗದ ೨೨ ಗ್ರಾಮ ಪಂಚಾಯತ ಸದಸ್ಯರುಗಳ ಒಕ್ಕೂಟದ ತಾಲೂಕಾಧ್ಯಕ್ಷರಾಗಿ ಇಸಳೂರು ಗ್ರಾಮ ಪಂಚಾಯತ ಸದಸ್ಯ ನವೀನ್ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.‌

ತಾಲೂಕಿನ ಹುಲೇಕಲ್ ಗ್ರಾಮ ಪಂಚಾಯತದ ಸಭಾಭವನದಲ್ಲಿ ಮಂಗಳವಾರ ಗ್ರಾಪಂ ಹುಲೇಕಲ್ ಅಧ್ಯಕ್ಷ ಖಾಸೀಂ ಸಾಬ ಅಧ್ಯಕ್ಷತೆಯಲ್ಲಿ ನಡೆದ ಪಂಚಾಯತ ಸದಸ್ಯರ ಸಭೆಯಲ್ಲಿ ಅಧ್ಯಕ್ಷ, ಪದಾಧಿಕಾರಿಗಳ ಆಯ್ಕೆ ನಡೆಯಿತು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಯಡಳ್ಳಿ ಗ್ರಾಮ ಪಂಚಾಯತ ಸದಸ್ಯ ರವೀಶ ಹೆಗಡೆ ಮಾಳೇನಳ್ಳಿ, ರಾಜ್ಯ ಸಮಿತಿಯ ಸದಸ್ಯರಾಗಿ ಕುಳವೆ ಗ್ರಾಮ ಪಂಚಾಯತ ಸದಸ್ಯ ಸಂದೇಶ ಭಟ್ ಬೆಳಖಂಡ, ಜಿಲ್ಲಾ ಸಮಿತಿಯ ಸದಸ್ಯರಾಗಿ ಕೋಡ್ನಗದ್ದೆ ಗ್ರಾಪಂ ಸದಸ್ಯ ಪ್ರವೀಣ ಹೆಗಡೆ ಮಣ್ಮನೆ ಹಾಗೂ ಭೈರುಂಬೆ ಗ್ರಾಪಂ ಸದಸ್ಯ ಪ್ರಕಾಶ ಹೆಗಡೆ ಹಲಗೆ ಮತ್ತು ತಾಲೂಕಾ ಸಮಿತಿಯ ಉಪಾಧ್ಯಕ್ಷರಾಗಿ ಸೋಂದಾ ಗ್ರಾಪಂ ಸದಸ್ಯೆ ಸವಿತಾ ಚನ್ನಯ್ಯ, ಸಾಲ್ಕಣಿ ಗ್ರಾಪಂ ಸದಸ್ಯೆ ಸುಮಾ‌ ಹೆಗಡೆ, ವಾನಳ್ಳಿ ಗ್ರಾಪಂ ಸದಸ್ಯ ಜಯರಾಮ ಹೆಗಡೆ, ದೇವನಹಳ್ಳಿ ಗ್ರಾಪಂ ಸದಸ್ಯ ನಾರಾಯಣ ಹೆಗಡೆ, ಖಜಾಂಚಿಯಾಗಿ ಹುಲೇಕಲ್ ಗ್ರಾಪಂ ಸದಸ್ಯ ಮಂಜು ಪೂಜಾರಿ ಆಯ್ಕೆಯಾದರು.

300x250 AD

ಗ್ರಾಮ ಪಂಚಾಯತ ಒಕ್ಕೂಟದ ರಾಜ್ಯ ಸಮಿತಿಯ ಅಡಿಯಲ್ಲಿ ಶಿರಸಿ ತಾಲೂಕಿನ ಒಕ್ಕೂಟ ಕಾರ್ಯನಿರ್ವಹಿಸಲಿದ್ದು, ಆಯ್ಕೆ ಪ್ರಕ್ರಿಯೆಯನ್ನು ಒಕ್ಕೂಟದ ಜಿಲ್ಲಾ ಸಂಚಾಲಕ ಎಮ್.ಕೆ.ಭಟ್ ಯಲ್ಲಾಪುರ ಹಾಗೂ ಜಿಲ್ಲಾ ಸಮಿತಿ ಸದಸ್ಯ ಗಣೇಶ ಹೆಗಡೆ ನಡೆಸಿಕೊಟ್ಟರು. ಈ ವೇಳೆ ತಾಲೂಕಿನ ವಿವಿಧ ಗ್ರಾಮ ಪಂಚಾಯತಗಳ ಸದಸ್ಯರು ಇದ್ದರು.

Share This
300x250 AD
300x250 AD
300x250 AD
Back to top