Slide
Slide
Slide
previous arrow
next arrow

ಬಿಜಿಎಸ್ ಸ್ಕೂಲ್‌ನಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ: ವಾಲಿಬಾಲ್‌, ಹ್ಯಾಂಡ್‌‌ಬಾಲ್ ಪಂದ್ಯಾವಳಿ

300x250 AD

ಕುಮಟಾ: ಇಲ್ಲಿನ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಮಿರ್ಜಾನಿನ ಬಿಜಿಎಸ್ ಸೆಂಟ್ರಲ್‌ ಸ್ಕೂಲಿನ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯತ್‌ ಉತ್ತರ ಕನ್ನಡ, ಜಿಲ್ಲಾ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಕಾರವಾರ (ಉತ್ತರ ಕನ್ನಡ), ತಾಲೂಕಾ ಪಂಚಾಯತ್‌ ಕುಮಟಾ ಹಾಗೂ ಬಿಜಿಎಸ್ ಸೆಂಟ್ರಲ್‌ ಸ್ಕೂಲ್‌, ಮಿರ್ಜಾನ್‌ ಇವರ ಸಂಯುಕ್ತ ಆಶ್ರಯದಲ್ಲಿ  ಜಿಲ್ಲಾಮಟ್ಟದ ದಸರಾ ವಾಲಿಬಾಲ್‌ ಮತ್ತು ಹ್ಯಾಂಡ್‌‌ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ಜಿಲ್ಲಾ ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕರು ರವಿ ನಾಯ್ಕ ಮಾರ್ಗದರ್ಶನದಲ್ಲಿ ಜಿಲ್ಲಾಮಟ್ಟದ ದಸರಾ ವಾಲಿಬಾಲ್‌ ಮತ್ತು ಹ್ಯಾಂಡ್‌‌ಬಾಲ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಯುವ ಸಬಲೀಕರಣ, ಕ್ರೀಡಾ ಇಲಾಖೆ ತಾಲೂಕಾ ಸಹಾಯಕ ನಿರ್ದೇಶಕ ವೆಂಕಟೇಶ ನಾಯ್ಕ, ದೈಹಿಕ ಶಿಕ್ಷಕ‌ರಾದ ತಿಮ್ಮಪ್ಪ ಪಿ. ನಾಯಕ, ರಾಘವೇಂದ್ರ ಗೌಡ, ಬಿಜಿಎಸ್ ಸೆಂಟ್ರಲ್‌ ಸ್ಕೂಲಿನ ಆಡಳಿತಾಧಿಕಾರಿ ಜಿ. ಮಂಜುನಾಥ, ಬಿಜಿಎಸ್ ಸೆಂಟ್ರಲ್‌ ಸ್ಕೂಲಿನ
ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ನಿರ್ಣಾಯಕರಾಗಿ ಆಗಮಿಸಿದ ರಾಘವೇಂದ್ರ ಗೌಡ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಶಿಕ್ಷಣದ ಜೊತೆಗೆ  ಕ್ರೀಡೆಗಳಿಗೆ ಯಾವಾಗಲೂ ಪ್ರಾಶಸ್ತ್ಯವನ್ನು ನೀಡುತ್ತಾ ಬಂದಿದ್ದಾರೆ ಎಂದರು. ಅಲ್ಲದೇ  ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರಿಗೆ ಕ್ರೀಡೆಯ ಬಗ್ಗೆ ಇರುವ ವಿಶೇಷವಾದ ಪ್ರೀತಿಯನ್ನು ಈ ಸಂದರ್ಭದಲ್ಲಿ
ಸ್ಮರಿಸಿದರು.

ಆಡಳಿತಾಧಿಕಾರಿ ಜಿ.ಮಂಜುನಾಥ ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಬಗ್ಗೆ ತಿಳಿಸಿ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ, ಸೋಲಿಗೆ ಕುಗ್ಗದೆ, ಗೆಲುವಿಗೆ ಹಿಗ್ಗದೆ ಸೋಲು-ಗೆಲುವನ್ನು ಕೀಡಾಮನೋಭಾವದಿಂದ ಸಮಾನವಾಗಿ ಸ್ವೀಕರಿಸಿ, ಸ್ವ‍ಸ್ಥ ಶರೀರದಲ್ಲಿ  ಸ್ವ‍ಸ್ಥ ಮನಸು ನೆಲೆಸಿರುತ್ತದೆ. ನೀವು ಸಾಧನೆ ಮಾಡಬೇಕಾದರೆ ತುಂಬಾ ಪರಿಶ್ರಮ ಪಡಬೇಕು ಅಂದಾಗ ಮಾತ್ರ ನೀವು ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದರು.

300x250 AD

ಪ್ರಾಂಶುಪಾಲೆ ಶ್ರೀಮತಿ ಅರ್ಚನಾ ಭಟ್‌ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಪುರುಷ ಹಾಗೂ ಮಹಿಳೆಯರ ವಿಭಾಗದ ವಾಲಿಬಾಲ್‌ ಹಾಗೂ ಹ್ಯಾಂಡ್‌‌ಬಾಲ್‌ ಪಂದ್ಯಾವಳಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 12 ತಾಲೂಕಗಳ ತಂಡಗಳು ಭಾಗವಹಿಸಿದ್ದವು. ಪುರುಷರ ವಾಲಿಬಾಲ್‌ ಪಂದ್ಯಾವಳಿಯಲ್ಲಿ ಕುಮಟಾ ತಂಡ ಪ್ರಥಮ ಸ್ಥಾನ, ಶಿರಸಿ ತಂಡ ದ್ವಿತೀಯ ಸ್ಥಾನವನ್ನು, ಮಹಿಳೆಯರ ವಿಭಾಗದಲ್ಲಿ ಶಿರಸಿ ಪ್ರಥಮ, ಕುಮಟಾ ತಂಡ ದ್ವಿತೀಯ ಸ್ಥಾನ ಪಡೆದವು. ಪುರುಷರ ಹ್ಯಾಂಡ್‌ ಬಾಲ್‌ ಪಂದ್ಯಾವಳಿಯಲ್ಲಿ ಶಿರಸಿ ತಂಡ ಪ್ರಥಮ ಸ್ಥಾನವನ್ನು, ಬಿಜಿಎಸ್‌ ಸೆಂಟ್ರಲ್‌ ಸ್ಕೂಲ್, ಮಿರ್ಜಾನ್‌, ಕುಮಟಾ ತಂಡ ದ್ವಿತೀಯ ಸ್ಥಾನವನ್ನು, ಮಹಿಳೆಯ ವಿಭಾಗದಲ್ಲಿ ಬಿಜಿಎಸ್‌ ಸೆಂಟ್ರಲ್‌ ಸ್ಕೂಲ್, ಮಿರ್ಜಾನ್‌, ಕುಮಟಾ ತಂಡ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಅಂಕೋಲಾ ತಂಡ ಪಡೆದುಕೊಂಡಿತು. ಈ ಒಂದು ಕ್ರೀಡಾಕೂಟ  ಯಶಸ್ವಿಯಾಗಿ ನಡೆಯಲು ಗೋಪಾಲಕೃಷ್ಣ ಪಿ. ನಾಯಕ, ದೇವಾನಂದ ಎಂ. ಕೆರೆಮನೆ, ಬಾಲಕೃಷ್ಣ ನಾಯಕ, ವೈಭವ ಗಾಂವಕರ, ಪ್ರತಾಪ ಪ್ರಭು, ಗುರುಪಾದ ಗೌಡ, ನಾಗರತ್ನ ನಾಯ್ಕ, ಆನಂದ ನಾಯ್ಕ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.
ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿಯಾಗಿ ಸಂಘಟಿಸಲು ಶ್ರೀಧರ ಹೆಚ್.‌ ಆರ್., ಮಹೇಶ ಹೆಗಡೆ, ಆನಂದ ಗೌಡ,  ಸುರೇಶ ಗೌಡ, ನಾಗರಾಜ ಪಟಗಾರ , ಮಂಜುನಾಥ ಗುನಗ, ಗಣಪತಿ ನಾಯಕ, ಮೃತ್ಯುಂಜಯ ಗೌಡ ಸಹಕರಿಸಿದರು.

ಕುಮಾರಿ ಸೃಷ್ಟಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಬಿಜಿಎಸ್‌ ಸೆಂಟ್ರಲ್‌ ಸ್ಕೂಲಿನ ದೈಹಿಕ ಶಿಕ್ಷಕರಾದ ಬಾಲಕೃಷ್ಣ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನೂ ಸ್ವಾಗತಿಸಿದರು.  ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ಶ್ರೀಧರ ಹೆಚ್.‌ ಆರ್. ನಿರ್ವಹಿಸಿದರು.  ಉಪನ್ಯಾಸಕರಾದ ಪ್ರತಾಪ್‌ ಪ್ರಭು ವಂದಿಸಿದರು. ಮಾಧ್ಯಮ ಸಲಹೆಗಾರರಾಗಿ ಶಿಕ್ಷಕ ರಮೇಶ ನಾಯ್ಕ ಕಾರ್ಯನಿರ್ವಹಿಸಿದರು.

Share This
300x250 AD
300x250 AD
300x250 AD
Back to top