Slide
Slide
Slide
previous arrow
next arrow

ವಾ.ಕ.ರ.ಸಾ.ಸಂಸ್ಥೆ ಪ.ಜಾ.,ಪ.ಪಂ ನೌಕರರ ಸಂಘದ ಅಧ್ಯಕ್ಷರಾಗಿ ಹರಳಯ್ಯ ಲೋಗಾವಿ

300x250 AD

ದಾಂಡೇಲಿ : ಧಾರವಾಡ ಗ್ರಾಮಾಂತರ ವಿಭಾಗದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ.ಜಾ/ಪ.ಪಂ ನೌಕರರ ಸಂಘದ ನೂತನ ಅಧ್ಯಕ್ಷರಾಗಿ ದಾಂಡೇಲಿ ಸಾರಿಗೆ ಘಟಕದ ಬಸ್ ನಿರ್ವಾಹಕರಾದ ಹರಳಯ್ಯ ಪಿ. ಲೋಗಾವಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಸಂಘದ ಕಾರ್ಯಾಧ್ಯಕ್ಷರಾಗಿ ದಾಂಡೇಲಿಯ ಸಾರಿಗೆ ಘಟಕದ ಸಾರಿಗೆ ನಿಯಂತ್ರಕರಾದ ಶಿವಾನಂದ ರಾಥೋಡ್ ಅವರನ್ನು ಆಯ್ಕೆ ಮಾಡಲಾಯಿತು. ಸಂಘದ ಉಪಾಧ್ಯಕ್ಷರಾಗಿ ಹಳಿಯಾಳ ಸಾರಿಗೆ ಘಟಕದ ಬಸ್ ನಿರ್ವಾಹಕರಾದ ಡಿ. ಶಾಂತಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ದಾಂಡೇಲಿ ಸಾರಿಗೆ ಘಟಕದ ಬಸ್ ನಿರ್ವಾಹಕರಾದ ಭಾಗ್ಯೋದಯ ಭಜಂತ್ರಿ‌ ಅವರನ್ನು ಹಾಗೂ ಖಜಾಂಚಿಯಾಗಿ  ಹಳಿಯಾಳ ಸಾರಿಗೆ ಘಟಕದ ಬಸ್ ನಿರ್ವಾಹಕರಾದ ಸಂತೋಷ ಮುಡುಬಿ ಅವರನ್ನು ಆಯ್ಕೆ ಮಾಡಲಾಯಿತು. ಸಹಕಾರ್ಯದರ್ಶಿಗಳಾಗಿ ದಾಂಡೇಲಿ ಸಾರಿಗೆ ಘಟಕದ ತಾಂತ್ರಿಕ ಸಿಬ್ಬಂದಿ ಬಸವರಾಜ್ ನಿಂಬಾಳ್ ಮತ್ತು ದಾಂಡೇಲಿ ಸಾರಿಗೆ ಘಟಕದ ಸಾರಿಗೆ ನಿಯಂತ್ರಕರಾದ ನಾಮದೇವ ಕಾಂಬಳೆ ಅವರು ಆಯ್ಕೆಯಾಗಿದ್ದಾರೆ.

ಧಾರವಾಡದಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಪ.ಜಾ/ಪ.ಪಂ ನೌಕರರ ಸಂಘದ ಅಧ್ಯಕ್ಷರಾದ ಗಂಗಾಧರ ಕಮಲದಿನ್ನಿ ಮತ್ತು ಪ್ರಧಾನ ಕಾರ್ಯದರ್ಶಿ ಮಹದೇವ ಬಿ. ಮಾನೆ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

300x250 AD

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗದಲ್ಲಿ ಬರುವ ದಾಂಡೇಲಿ, ಹಳಿಯಾಳ, ರಾಮದುರ್ಗ, ಸವದತ್ತಿ ಮತ್ತು ಧಾರವಾಡ ಗ್ರಾಮಾಂತರ ಸಾರಿಗೆ ಘಟಕದ ಪ.ಜಾ/ಪ.ಪಂ ನೌಕರರ ಸಂಘಟನೆಯಾಗಿ ಕಳೆದ ಅನೇಕ ವರ್ಷಗಳಿಂದ ಈ ಸಂಘವು ಸಂಘದ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

Share This
300x250 AD
300x250 AD
300x250 AD
Back to top