Slide
Slide
Slide
previous arrow
next arrow

ಪ್ರತಿಭಾ ಕಾರಂಜಿಯಲ್ಲಿ ಗೆಲುವು ಸಾಧಿಸಿದ ಲಯನ್ಸ್ ಪ್ರತಿಭೆಗಳು

300x250 AD

ಶಿರಸಿ: ನಗರದ ಕೆಎಚ್‌ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಲಯನ್ಸ್ ಶಾಲೆಯ ಕಿರಿಯ ಹಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿದ್ದಾರೆ.

ಒಟ್ಟು 27 ಸ್ಪರ್ಧೆಗಳಿದ್ದು 18 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಬಹುಮಾನವನ್ನು ಗಳಿಸಿರುವುದು ಶಾಲೆಯ ಹೆಗ್ಗಳಿಕೆಯಾಗಿದೆ. 7 ಪ್ರಥಮ , 8 ದ್ವಿತೀಯ , 3 ತೃತೀಯ ಸ್ಥಾನಗಳಿಸಿದ್ದಾರೆ. ಕಿರಿಯರ ವಿಭಾಗದಲ್ಲಿ ಛದ್ಮವೇಷ ಇನಿಕಾ ಹುಲೆಕಲ್ ಪ್ರಥಮ,ಆಶುಭಾಷಣ ಶಾನ್ವಿತಾ ಶೆಟ್ಟಿ ಪ್ರಥಮ,ಕಥೆ ಹೇಳುವುದು ಸಾನ್ವಿ ಹೆಗಡೆ ಪ್ರಥಮ, ಚಿತ್ರಕಲೆ ಪೂರ್ವಿ ಪಾಲೇಕರ ಪ್ರಥಮ, ಸಂಸ್ಕೃತ ಧಾರ್ಮಿಕ ಪಠಣ ಪ್ರಥಮ್ ಭಟ್ ದ್ವಿತೀಯ, ಇಂಗ್ಲಿಷ್ ಕಂಠಪಾಠ ಎ.ಎಂ. ಸುಮೇರು ದ್ವಿತೀಯ, ಅಭಿನಯ ಗೀತೆ ಚೈತನ್ಯ ಹೆಗಡೆ ದ್ವಿತೀಯ, ದೇಶಭಕ್ತಿ ಗೀತೆ ನೇಹಾ ಹೆಗಡೆ ದ್ವಿತೀಯ, ಭಕ್ತಿ ಗೀತೆ ನೇಹಾ ಹೆಗಡೆ ದ್ವಿತೀಯ, ಹಿರಿಯರ ವಿಭಾಗದಲ್ಲಿ ಭಕ್ತಿ ಗೀತೆ ಅವನಿ ಗಣೇಶ್ ಭಟ್ ಪ್ರಥಮ, ಕಥೆ ಹೇಳುವುದು ಭೂಮಿಕಾ ಮಂಜುನಾಥ ಶಾಸ್ತ್ರಿ ಪ್ರಥಮ, ಪ್ರಬಂಧ ರಚನೆ ಪಲ್ಲವಿ ನಾಗರಾಜ್ ಜೋಶಿ ಪ್ರಥಮ, ಹಿಂದಿ ಕಂಠಪಾಠ ಪ್ರಣತಿ ಬಾಲಚಂದ್ರ ಹೆಗಡೆ ದ್ವಿತೀಯ, ದೇಶಭಕ್ತಿ ಗೀತೆ ಕಲ್ಯಾಣ್ ಭಟ್ ದ್ವಿತೀಯ, ಕ್ಲೇ ಮಾಡ್ಲಿಂಗ್ ಅರ್ಪಿತ್ ನವೀನ್ ಶಾಸ್ತ್ರಿ ದ್ವಿತೀಯ, ಆಶುಭಾಷಣ ಗುರುದತ್ ದಿನೇಶ್ ಶೆeಟ ತೃತೀಯ, ಚಿತ್ರಕಲೆ ನಿಶ್ಚಿತ ಭಟ್ ತೃತೀಯ, ಸಂಸ್ಕೃತ ಧಾರ್ಮಿಕ ಪಠಣ ಪಲ್ಲವಿ ನಾಗರಾಜ್ ಜೋಶಿ ತೃತೀಯ ಸ್ಥಾನಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಕಿರಿಯ ವಿಭಾಗದಲ್ಲಿ ಶ್ರೀಮತಿ ರೂಪಾ ನಾಯ್ಕ, ಶ್ರೀಮತಿ ಮಾಧುರಿ ಪರಾಂಜಪೆ ಹಿರಿಯ ವಿಭಾಗದಲ್ಲಿ ವೀಣಾ ಸಿರ್ಸಿಕರ್ ಪ್ರತಿಭಾ ಕಾರಂಜಿಯ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಈ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಶೈಕ್ಷಣಿಕ ಮುಖ್ಯಸ್ಥರು, ಶಿಕ್ಷಕ ವೃಂದ, ಶಿಕ್ಷಕೇತರ ಸಿಬ್ಬಂದಿಗಳು ಸಾಧಕ ವಿದ್ಯಾರ್ಥಿಗಳನ್ನು, ಪಾಲಕರನ್ನು ಮಾರ್ಗದರ್ಶಕ ಶಿಕ್ಷಕರನ್ನು ಅಭಿನಂದಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top