Slide
Slide
Slide
previous arrow
next arrow

ಮರಗಳ ಅಕ್ರಮ ಸಾಗಾಟ: ಈರ್ವರ ಬಂಧನ

300x250 AD

ಬನವಾಸಿ: ಅಕ್ರಮವಾಗಿ ಸಾಗವಾನಿ ಜಾತಿ ಮರಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಮರಗಳ್ಳರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.

ಸಮೀಪದ ದಾಸನಕೊಪ್ಪದ ರಾಜಾಸಾಬ ಅಲ್ಲಾಭಕ್ಷ ದಾಸನಕೊಪ್ಪ (53) ಹಾಗೂ ಹೊಸಕೊಪ್ಪದ ಕಾಂತಪ್ಪ ಮಾಸ್ತಪ್ಪ ಚೆನ್ನಯ್ಯ (43) ಬಂಧಿತ ವ್ಯಕ್ತಿಗಳು. ಇವರಿಬ್ಬರು ವದ್ದಲಾ ಗ್ರಾಮದಲ್ಲಿ ಸಾಗವಾನಿ ಜಾತಿಯ 10 ನಾಟಾ ತುಂಡು ಹಾಗೂ ಎರಡು ಬಿಲೆಟ್ಸ್‌ಗಳನ್ನು ಮಹೀಂದ್ರ ಪಿಕ್ಅಪ್ ವಾಹನದಲ್ಲಿ ಅನಧಿಕೃತವಾಗಿ ಸಾಗಾಟ ಮಾಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯಾ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ನಡೆಸಿ, ವಾಹನ ಹಾಗೂ ಸಾಗವಾನಿ ನಾಟಾಗಳನ್ನು ವಶಪಡಿಸಿಕೊಂಡಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ಬನವಾಸಿ ವಲಯಾರಣ್ಯಾಧಿಕಾರಿ ಭವ್ಯಾ ನಾಯ್ಕ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಾರ್ತಿಕ್ ನಾರ್ವೆಕರ್, ಮಂಜುನಾಥ ಗಂಗೆಮತ, ಗಸ್ತು ಅರಣ್ಯ ಪಾಲಕರಾದ ರಮೇಶ.ಹೆಚ್.ಸಿ, ನನ್ನೇಸಾಬ್ ಹುಸೇನ್ ಸಾಬ, ಅಲ್ಲಾಭಕ್ಷ ರಾಜೇಸಾಬ ಶೇಕ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

300x250 AD

Share This
300x250 AD
300x250 AD
300x250 AD
Back to top