Slide
Slide
Slide
previous arrow
next arrow

ತಂದೆ ಸ್ಥಾಪಿಸಿದ್ದ ಪುರಸ್ಕಾರ ನಿಧಿಗೆ ಮಗನಿಂದ ಹತ್ತು ಸಾವಿರ ರೂ. ಸೇರ್ಪಡೆ

300x250 AD

ಶಿರಸಿ: ತಾಲೂಕಿನ ಮಾಡನಕೇರಿ ಗ್ರಾಮದ ಹಿರಿಯರಾದ, ಸರಕಾರಿ ಹಿ. ಪ್ರಾ. ಶಾಲೆ, ಮಾಡನಕೇರಿಯ ಅನೇಕ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತವರೂ ಆದ ಶಿವಾನಂದ ಭಟ್  ಅವರು ತಮ್ಮ ತಂದೆ ದಿ. ಸೀತಾರಾಮ ಭಟ್ಟ 30 ವರ್ಷಗಳ ಹಿಂದೆ ಮಾಡನಕೇರಿ ಶಾಲೆಯಲ್ಲಿ ಸ್ಥಾಪಿಸಿದ್ದ ಪುರಸ್ಕಾರ ನಿಧಿಗೆ ರೂ. 10000 ಸೇರಿಸುವ ಮೂಲಕ ಉದಾರತೆ ಮೆರೆದಿದ್ದಾರೆ.  ಸ್ವಾತಂತ್ರ್ಯ ದಿನಾಚರಣೆಯಂದು ಪುರಸ್ಕಾರ ನಿಧಿಯನ್ನು ಘೋಷಿಸಿದ್ದ ಅವರು ಬುಧವಾರ ಎಸ್‌ಡಿ‌ಎಮ್‌ಸಿ ಅಧ್ಯಕ್ಷರಿಗೆ ಪುರಸ್ಕಾರ ನಿಧಿಯನ್ನು ನೀಡಿದರು. 

ಎಸ್‌ಡಿ‌ಎಮ್‌ಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ ವೃಂದದವರು ಶ್ರೀಯುತರ ಕೊಡುಗೆಯನ್ನು ಸ್ಮರಿಸಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

300x250 AD

Share This
300x250 AD
300x250 AD
300x250 AD
Back to top