ಜೋಯಿಡಾ: ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾಡಳಿತ ,ಉ.ಕ ಕೃಷಿ ಇಲಾಖೆ ,ತೋಟಗಾರಿಕಾ ಇಲಾಖೆ ,ಕೃಷಿ ವಿಜ್ಞಾನ ಕೇಂದ್ರ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಜೂ.17ರಂದು ಜೊಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕಾಗಿ ಪರಿವರ್ತಿಸುವ ಕಾರ್ಯಕ್ರಮವು ನಡೆಯಿತು. ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ ಉತ್ತರ ಕನ್ನಡ ಸಾವಯವ ಒಕ್ಕೂಟದ ಕಾಳುಮೆಣಸು ಮತ್ತು ಅರಿಶಿಣ ಹಾಗೂ ಜೇನುತುಪ್ಪವನ್ನು ನೆಲಸಿರಿ ಬ್ರಾಂಡ್ನಲ್ಲಿ ಬಿಡುಗಡೆಗೊಳಿಸಿದರು.
ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಉತ್ತರಕನ್ನಡ ಸಾವಯವ ಒಕ್ಕೂಟ ನಡೆದು ಬಂದ ಹಾದಿ , ನೆಲಸಿರಿ ಬ್ರಾಂಡ್ ಉತ್ಪನ್ನಗಳ ಕುರಿತು ಸಭೆಗೆ ವಿವರಣೆ ನೀಡಿದರು. ಈ ವೇಳೆ ಶಾಸಕ ಆರ್. ವಿ. ದೇಶಪಾಂಡೆ,, ಕೃಷಿ ಇಲಾಖೆ ಕಮಿಷನರ್ ವಾಯ್.ಎಸ್.ಪಾಟೀಲ್, ಕೃಷಿ ಇಲಾಖೆ ನಿರ್ದೇಶಕ ಡಾ.ಜಿ.ಟಿ.ಪುತ್ರ, ಶ್ರೀ ಶಿವಪ್ರಸಾದ ಗಾಂವಕರ್ ಜಂಟಿ ಕೃಷಿ ನಿರ್ದೇಶಕ ಉತ್ತರಕನ್ನಡ,ಜಿ.ಆಯ್.ಝಡ್ ಸಂಸ್ಥೆಯ ನರ್ಮತಾ ಶರ್ಮಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಜೋಯ್ಡಾ ತಾಲೂಕನ್ನು ಸಾವಯವ ತಾಲೂಕಾಗಿ ಪರಿವರ್ತಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.