Slide
Slide
Slide
previous arrow
next arrow

ಬಿಜೆಪಿ ಮುಖಂಡನ ಮೇಲೆ ಹಲ್ಲೆ: ದೂರು ದಾಖಲು

300x250 AD

ಭಟ್ಕಳ: ರಸ್ತೆ ದಾಟುತ್ತಿದ್ದ ಬಿಜೆಪಿ ಮುಖಂಡನ ಮೇಲೆ ತಾಲೂಕಿನ ಕಾಲೇಜು ವಾಹನ ಚಾಲಕನೋರ್ವ ಅನಾವಶ್ಯಕ ಹಲ್ಲೆ ಮಾಡಿರುವ ಘಟನೆ ಭಟ್ಕಳ ಶಂಸುದ್ದೀನ್ ಸರ್ಕಲ್ ಸಮೀಪ ನಡೆದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಚ್ಚಳ್ಳಿ ಮೂಡಭಟ್ಕಳ ನಿವಾಸಿ ರಾಘವೇಂದ್ರ ರಾಮಚಂದ್ರ ನಾಯ್ಕ (36) ಹಲ್ಲೆಗೊಳಗಾದ ವ್ಯಕ್ತಿ. ಇವರು ಹಲವು ವರ್ಷಗಳಿಂದ ಟಿ.ವಿ ಕೇಬಲ್ ಅಪರೇಟ‌ರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ತನ್ನ ವೈಯಕ್ತಿಕ ಕೆಲಸ ನಿಮಿತ್ತ ಕಾರವಾರದಿಂದ ಕಾರಿನ ಮೂಲಕ ಬಂದಿದ್ದರು.

ಭಟ್ಕಳ ಶಂಸುದ್ದೀನ್ ಸರ್ಕಲ್ ಬಳಿ ಇಳಿದು ಕೋಲಾ ಪ್ಯಾರಡೈಸ್ ಸಮೀಪವಿದ್ದ ಕೇಬಲ್‌ ಕಚೇರಿಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ಕೋಲಾ ಪ್ಯಾರಡೈಸ್ ರಸ್ತೆಯಿಂದ ಬಂದ ಕಾಲೇಜಿನ ವಾಹನ ಅತಿವೇಗವಾಗಿ ನನ್ನ ಮೇಲೆ ಬಂತು ಎಂದು ರಾಘವೇಂದ್ರ ದೂರಿದ್ದಾರೆ. ನಂತರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು,ಕೊಲೆ ಬೆದರಿಕೆ ಹಾಕಿದ್ದಾನೆ. ನಂತರ ಅಲ್ಲೇ ಸಮೀಪ ಕರ್ತವ್ಯ ನಿರತ ಪೊಲೀಸರು ಸ್ಥಳಕ್ಕೆ ಬರುತ್ತಿರುವುದನ್ನು ನೋಡಿ ವಾಹನ ಚಾಲಕ ಓಡಿ ಹೋಗಿದ್ದಾನೆ. ನಂತರ ನನ್ನ ಸ್ನೇಹಿತರು ನನ್ನನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹಲ್ಲೆಗೊಳಗಾದ ರಾಘವೇಂದ್ರ ನಾಯ್ಕ ಆರೋಪಿಸಿದ್ದಾರೆ.

300x250 AD

ಸದ್ಯ ಕಾಲೇಜು ವಾಹನ ಚಾಲಕನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ

ರಾಘವೇಂದ್ರ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂದೂ ಮುಖಂಡ ಗೋವಿಂದ ನಾಯ್ಕ ಹಾಗೂ ಹಿಂದೂ ಕಾರ್ಯಕರ್ತರು ಆಸ್ಪತ್ರೆಗೆ ಭೇಟಿ ನೀಡಿ ರಾಘವೇಂದ್ರ ನಾಯ್ಕರ ಯೋಗ ಕ್ಷೇಮ ವಿಚಾರಿಸಿದ್ದಾರೆ.

Share This
300x250 AD
300x250 AD
300x250 AD
Back to top