Slide
Slide
Slide
previous arrow
next arrow

ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆ : ಅಷ್ಪಾಕ್ ಶೇಖ್

300x250 AD

ದಾಂಡೇಲಿ : ನಗರದ ಸಮಗ್ರ ಅಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿಕೊಂಡು ಅತ್ಯಂತ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇವೆ. ನಗರದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಲು ಮೊದಲ ಆದ್ಯತೆಯನ್ನು ನೀಡಲಾಗುವುದು ಎಂದು ನಗರಸಭೆಯ ನೂತನ ಅಧ್ಯಕ್ಷರಾದ ಅಷ್ಪಾಕ್ ಶೇಖ ಮುಕ್ತವಾಗಿ ಮಾತನಾಡಿದರು.

ನಗರದಲ್ಲಿರುವ ವಿವಿಧ ಸಮಸ್ಯೆಗಳ ಬಗ್ಗೆ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ ಅಷ್ಪಾಕ್ ಶೇಖ ಅವರು ನಗರಸಭೆಯ ಸರ್ವ ಸದಸ್ಯರ ಹಾಗೂ ನಗರಸಭೆಯ ಪೌರಾಯುಕ್ತರ ಮತ್ತು ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಸಹಕಾರದಲ್ಲಿ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಅಷ್ಪಾಕ್ ಶೇಖ್ ಹೇಳಿದರು.

300x250 AD

ಅಷ್ಪಾಕ್ ಶೇಖ್ ಅವರ ಮಾತಿಗೆ ನಗರಸಭೆ ಉಪಾಧ್ಯಕ್ಷರಾದ ಶಿಲ್ಪ ಕೋಡೆ ಅವರು ಧ್ವನಿಗೂಡಿಸಿ, ನಗರದ ಸಮಗ್ರ ಅಭಿವೃದ್ಧಿಯನ್ನೆ ಮೂಲ ಮಂತ್ರವನ್ನಾಗಿಸಿಕೊಂಡಿದ್ದೇವೆ ಎಂದರು.

Share This
300x250 AD
300x250 AD
300x250 AD
Back to top