Slide
Slide
Slide
previous arrow
next arrow

ಅತಿವೃಷ್ಟಿ ಸಂತ್ರಸ್ತರಿಗೆ ಶೆಲ್ಟರ್ ಕಿಟ್ ವಿತರಣೆ

300x250 AD

ಯಲ್ಲಾಪುರ: ಮನುವಿಕಾಸ ಸಂಸ್ಥೆ ಹಾಗೂ ಆಶ್ರಯ ಹಸ್ತ ಟ್ರಸ್ಟ್, ಬೆಂಗಳೂರು ವತಿಯಿಂದ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಮನೆ ಹಾನಿಗೊಳಗಾದ ಬಡ ಕುಟುಂಬಗಳಿಗೆ ಶೆಲ್ಟರ್ ಕಿಟ್‌ಗಳನ್ನು ನೀಡುವ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಪಟ್ಟಣ ಪಂಚಾಯತ್‌ನ ಅಧ್ಯಕ್ಷೆ ನರ್ಮದಾ ನಾಯ್ಕ ಕಿಟ್ ವಿತರಿಸಿ ಮಾತನಾಡಿ, ತುರ್ತು ಸಂಧರ್ಭದಲ್ಲಿ ಮನುವಿಕಾಸ ಸಂಸ್ಥೆ ಒದಗಿಸುತ್ತಿರುವ ಸಹಾಯ ಅಸಾಯಕರಿಗೆ ವರದಾನ ಆಗಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ರವಿ ಕೈಟ್ಕರ್ ಮಾತನಾಡಿ, ಮನುವಿಕಾಸ ಸಂಸ್ಥೆಯ ಸಾಮಾಜಿಕ ಸೇವೆ ಹಾಗೂ ಮಾನವೀಯ ನೆರವು ಕಾರ್ಯಕ್ರಮ ಮಾದರಿಯಾಗಿದೆ ಎಂದರು.

300x250 AD

ಪಪಂ ಸಮುದಾಯ ಸಂಘಟಕಿ ಹೇಮಾವತಿ ಭಟ್ಟ ಉಪಸ್ಥಿತರಿದ್ದರು. ಇದೇ ವೇಳೆ ಸುಮಾರು 50 ಶೇಲ್ಟರ್ ಕಿಟ್‌ಗಳನ್ನು ಹಂಚಿಕೆ ಮಾಡಲಾಯಿತು. ಮನುವಿಕಾಸ ಸಂಸ್ಥೆಯ ಯೋಜನಾಧಿಕಾರಿ ಸೂರ್ಯ ಗುಂಡ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮನುವಿಕಾಸ ಸಂಸ್ಥೆಯ ಸಿಬ್ಬಂದಿಗಳಾದ ಗಣಪತಿ ಗಾಮದ್, ನಾಗರಾಜ ಹಸ್ಲರ್,ರಾಮಚಂದ್ರ ಸಿದ್ದಿ, ಕಿರಣ್ ಗೌಡ ಇದ್ದರು.

Share This
300x250 AD
300x250 AD
300x250 AD
Back to top