Slide
Slide
Slide
previous arrow
next arrow

ಇಲಿಜ್ವರ ಸೋಂಕಿತರ ಸಂಖ್ಯೆ ಹೆಚ್ಚಳ: ಮುನ್ನೆಚ್ಚರಿಕೆ ವಹಿಸಲು ಸೂಚನೆ

300x250 AD

ಯಲ್ಲಾಪುರ: ತಾಲೂಕಿನಲ್ಲಿ ಇಲಿಜ್ವರ ಪ್ರಕರಣಗಳು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ಬಾರಿ ಹೆಚ್ಚಿದ್ದು,ಒಟ್ಟು ನಾಲ್ಕು ಪ್ರಕರಣ ಈ ವರ್ಷ ವರದಿಯಾಗಿದ್ದು,ಈ ತಿಂಗಳಲ್ಲಿ ಮಂಚಿಕೇರಿ ಹಾಗೂ ಹುಣಶೆಟ್ಟಿಕೊಪ್ಪದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ ತಿಳಿಸಿದ್ದಾರೆ.

ಅವರು ಶುಕ್ರವಾರ ಈ ಕುರಿತು ಮಾಹಿತಿ ನೀಡಿ, ಲೆಪ್ಟೊಸ್ಪೈರೋಸಿಸ್ (ಇಲಿಜ್ವರ) ಎಂಬುದು ಒಂದು ಬ್ಯಾಕ್ಟೀರಿಯಾದ ಸೋಂಕು ಆಗಿದೆ. ಇದು ಮನುಷ್ಯರಿಗೆ ಮತ್ತು ಪ್ರಾಣಿಗಳಿಗೆ ಬಾಧಿಸುತ್ತದೆ. ಈ ರೋಗವು ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ, ಸಾಮಾನ್ಯವಾಗಿ ಸೋಂಕಿತ ಪ್ರಾಣಿಗಳಾದ ಇಲಿಗಳು ಮತ್ತು ಇತರ ದಂಶಕಗಳ ಮೂತ್ರದ ಮೂಲಕ ಹರಡುತ್ತದೆ. ಇಲಿಜ್ವರ ರೋಗವು ಜ್ವರ, ತಲೆ ನೋವು, ಸುಸ್ತು, ಮೈ-ಕೈ ನೋವು ಕಾಣಿಸಿಕೊಳ್ಳುತ್ತದೆ. ಇಲಿಜ್ವರ ಸಂಬಂಧಿತ ಅನಾರೋಗ್ಯ ತಡೆಗಟ್ಟಲು ಆರಂಭಿಕ ರೋಗ ನಿರ್ಣಯ ಮತ್ತು ಸಮಯೋಚಿತ ಚಿಕಿತ್ಸೆಯು ಅತ್ಯಗತ್ಯವಾಗಿರುತ್ತದೆ. ಜ್ವರ, ತಲೆ ನೋವು, ಸುಸ್ತು, ಮೈ-ಕೈ ನೋವು ಇತ್ಯಾದಿ ರೋಗ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ರೋಗ ನಿರ್ಣಯ ಮತ್ತು ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು.

ಕಲುಷಿತ ನೀರಿನ ಮೂಲಗಳೊಂದಿಗೆ ಸಂಪರ್ಕವನ್ನು ತಪ್ಪಿಸಬೇಕು. ನಿಂತ ನೀರು, ಪ್ರವಾಹ ಪೀಡಿತ ಪ್ರದೇಶಗಳು, ಇಲಿಗಳು ಮತ್ತು ಇತರ ದಂಶಕಗಳ ಆಗಾಗ್ಗೆ ಬರುವ ಪ್ರದೇಶಗಳಾಗಿವೆ. ಕಲುಷಿತ ನೀರು ಅಥವಾ ಮಣ್ಣಿನೊಂದಿಗೆ ಕೆಲಸ ಮಾಡುವಾಗ ಕೈಗವಸು, ಬೂಟುಗಳಂತಹ ರಕ್ಷಣಾತ್ಮಕ ಉಡುಪುಗಳನ್ನು ಧರಿಸಬೇಕು. ಕಲುಷಿತ ನೀರು ಅಥವಾ ಪರಿಸರದ ಸಂಪರ್ಕಕ್ಕೆ ಬಂದ ನಂತರ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ಕೈ-ಕಾಲುಗಳನ್ನು ತೊಳೆಯಬೇಕು. ನೈರ್ಮಲ್ಯ ಅಭ್ಯಾಸವನ್ನು ಕಾಪಾಡಿಕೊಳ್ಳಬೇಕು. ಶುದ್ಧವಾದ ಕುಡಿಯುವ ನೀರು ಹಾಗೂ ಆಹಾರ ಸೇವನೆ ಬಗ್ಗೆ ಎಚ್ಚರಿಕೆ ವಹಿಸಬೇಕು. ಮನೆ ಅಥವಾ ವಸತಿ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕಟ್ಟಡಗಳಲ್ಲಿನ ರಂದ್ರಗಳಲ್ಲಿ ಇಲಿಗಳು ಬಾರದಂತೆ ಮುಚ್ಚಬೇಕು. ಸಾಕು ಪ್ರಾಣಿಗಳ ವಾಸಿಸುವ ಪ್ರದೇಶಗಳು ಸ್ವಚ್ಛವಾಗಿ ಮತ್ತು ಇಲಿ ಮುಕ್ತವಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.

300x250 AD

ವೈದ್ಯೆ ಹತ್ಯೆ ಖಂಡಿಸಿ ಪ್ರತಿಭಟನೆಗೆ ಬೆಂಬಲ:

ಕೊಲ್ಕತ್ತಾ ಸರಕಾರಿ ವೈಧ್ಯಕೀಯ ಕಾಲೇಜಿನಲ್ಲಿ ಕಾರ್ಯನಿರತ ಯುವ ಮಹಿಳಾ ವೈದ್ಯಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ,ಆ.17 ರಂದು ಜಿಲ್ಲಾ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಕರೆಯ ಮೇರೆಗೆ ಯಲ್ಲಾಪುರದಲ್ಲೂ ಸರಕಾರಿ ವೈಧ್ಯಾಧಿಕಾರಿಗಳು ಒಂದು ದಿನ ಕಪ್ಪು ಪಟ್ಟಿ ಧರಿಸಿ ತುರ್ತು ವೈಧ್ಯಕೀಯ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆಗೆ ಬೆಂಬಲ ನೀಡಲು ನಿರ್ಧರಿಸಲಾಗಿದೆ. ಸಮುದಾಯ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಶನಿವಾರ ಹೊರರೋಗಿ ವಿಭಾಗದ ಸೇವೆ ಸ್ಥಗಿತ ವಾಗಲಿದೆ. ಎಲ್ಲಾ ಆರೋಗ್ಯ ಸಂಸ್ಥೆಗಳ ಎದುರು ಫಲಕ ಹಾಕಿ,ತುರ್ತು ಚಿಕಿತ್ಸೆ ವಿಭಾಗ ಮಾತ್ರ ಕಪ್ಪು ಪಟ್ಟಿ ಧರಿಸಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

Share This
300x250 AD
300x250 AD
300x250 AD
Back to top