Slide
Slide
Slide
previous arrow
next arrow

ಹೃದಯಾಘಾತದಿಂದ ಪೌರಕಾರ್ಮಿಕ ಮೃತ: ಹೆಬ್ಬಾರ್ ಸಂತಾಪ

300x250 AD

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವಾಗ ಹೃದಯಾಘಾತದಿಂದ ಪೌರಕಾರ್ಮಿಕನೊಬ್ಬ ಸೋಮವಾರ ಮೃತಪಟ್ಟಿದ್ದಾನೆ.

ಲಕ್ಷ್ಮಣ ಆಯಿತ್ರ ಹರಿಜನ (54) ಮೃತ ಪೌರ ಕಾರ್ಮಿಕ. ಈತ ಬೆಲ್ ರಸ್ತೆಯಲ್ಲಿ ರವಿವಾರದ ಸಂತೆಯ ವಹಿವಾಟಿನ ತ್ಯಾಜ್ಯ ವಿವೇವಾರಿ ಮಾಡುತ್ತಿದ್ದ ಸಂದರ್ಭದಲ್ಲಿ ಲೊ ಬಿಪಿ ಮತ್ತು ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಕಳೆದ 20 ವರ್ಷಗಳಿಂದ ಪಟ್ಟಣ ಪಂಚಾಯಿತಿಯ ಖಾಯಂ ನೌಕರನಾಗಿ ದಿನನಿತ್ಯದ ಸ್ವಚ್ಛತಾ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು.

300x250 AD

ಶಾಸಕ ಹೆಬ್ಬಾರ್ ಸಂತಾಪ:
ಪೌರಕಾರ್ಮಿಕನ ನಿಧನಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತೆರಳಿ ಪೌರಕಾರ್ಮಿಕನ ಮೃತದೇಹದ ಅಂತಿಮ ದರ್ಶನ ಪಡೆದ ಹೆಬ್ಬಾರ್, ಲಕ್ಷ್ಮಣ ಹರಿಜನ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಪ.ಪಂ. ಸದಸ್ಯರಾದ ಅಮಿತ ಅಂಗಡಿ, ರಾಧಾಕೃಷ್ಣ ನಾಯ್ಕ, ಕೈಸರ್ ಸೈಯ್ಯದ್ ಅಲಿ, ತಹಸೀಲ್ದಾರ ಅಶೋಕ ಭಟ್ಟ, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ್, ಸಿಪಿಐ ರಮೇಶ ಹನಾಪುರ ಇತರರಿದ್ದರು.

Share This
300x250 AD
300x250 AD
300x250 AD
Back to top