Slide
Slide
Slide
previous arrow
next arrow

ಮರಬಿದ್ದು ಮನೆಗೆ ಹಾನಿ: ಧನಸಹಾಯ ನೀಡಿದ ಶಿವಾನಂದ ಕಡತೋಕಾ

300x250 AD

ಹೊನ್ನಾವರ: ತಾಲೂಕಿನ ಹಳದಿಪುರ ಪಂಚಾಯತಿ ವ್ಯಾಪ್ತಿಯ ಬಗ್ರಾಣಿಯಲ್ಲಿ ಕೃಷ್ಣ ದೇವು ಗೌಡ ಅವರ ಮನೆಯ ಮೇಲೆ ವಿಪರೀತ ಗಾಳಿ-ಮಳೆಯಿಂದ ಬೃಹತ್ ಗಾತ್ರದ ಆಲದ ಮರ ಬಿದ್ದು ಸಂಪೂರ್ಣ ಮನೆ ಹಾನಿಯಾಗಿದ್ದು, ಮನೆಯ ಸದಸ್ಯರಿಗೂ ಗಾಯಗಳಾಗಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ಇವರನ್ನು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು ಮತ್ತು ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಮನೆಯ ಕುಟುಂಬದವರಿಗೆ ಧೈರ್ಯ ತುಂಬಿ ಧನಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಹಳದಿಪುರ ಗ್ರಾಮ ಪಂಚಾಯತಿ ಸದಸ್ಯರಾದ ನವೀನ ನಾಯ್ಕ ಸಾಲಿಕೇರಿ ಕೂಡ ಧನಸಹಾಯ ನೀಡಿ ಕುಟುಂಬಕ್ಕೆ ನೆರವಾದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವಾನಂದ ನಾಯ್ಕ,ಗೋವಿಂದ ಗೌಡ,ಶಂಶೀರ್ ಖಾನ್,ವೆಂಕಟೇಶ ಗೌಡ,ನಾಗರಾಜ ಗೌಡ,ರಾಮ ಗೌಡ,ಮಂಜುನಾಥ ಗೌಡ, ಕೃಷ್ಣ ಗೌಡ  ಮುಂತಾದವರು ಹಾಜರಿದ್ದರು.

300x250 AD
Share This
300x250 AD
300x250 AD
300x250 AD
Back to top