Slide
Slide
Slide
previous arrow
next arrow

ರಸ್ತೆಗುರುಳಿದ ಮರಗಳ ಅಪೂರ್ಣ ತೆರವು: ಜಿಕ್ರಿಯಾ ಮುಲ್ಲಾ ಅಸಮಾಧಾನ

300x250 AD

ಯಲ್ಲಾಪುರ: ತಾಲೂಕಿನ ಬಾರೆ ಚಿನ್ನಾಪುರ ರಸ್ತೆಯಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಗಾಳಿಗೆ ಹಲವು ಮರಗಳು ಬಿದ್ದಿದ್ದು, ತರಾತುರಿಯಲ್ಲಿ ಮರಗಳನ್ನು ಅಪೂರ್ಣ ತೆರವುಗೊಳಿಸಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಜಿಕ್ರಿಯಾ ಮುಲ್ಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಈ ಕುರಿತು ರವಿವಾರ ಹೇಳಿಕೆ ನೀಡಿ, ಬಿದ್ದ ಮರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸದೇ ಹಾಗೇ ಬಿಡಲಾಗಿದೆ. ಮೊದಲೇ ಸಿಕ್ಕಾಪಟ್ಟೆ ತಿರುವುಗಳಿಂದ ಕೂಡಿದ ಇಕ್ಕಟ್ಟಾದ ರಸ್ತೆಯಾಗಿದ್ದು,ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಬಿದ್ದ ಮರವನ್ನು ಹೇಗೇಗೋ ತೆರವು ಮಾಡಿ ಹೋಗುವುದು ಸರಿಯಲ್ಲ. ಪೂರ್ಣ ಪ್ರಮಾಣದಲ್ಲಿ ಬಿದ್ದ ಮರಗಳನ್ನು ತೆರವುಗೊಳಿಸುವ ಕಾರ್ಯ ಆಗಬೇಕು ಎಂದು  ಅವರು ಒತ್ತಾಯಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top