Slide
Slide
Slide
previous arrow
next arrow

ಅತಿವೃಷ್ಟಿ: ಅಡಿಕೆ ಬೆಳೆಗೆ ಕೊಳೆರೋಗದ ಆತಂಕ

300x250 AD

ಶಿರಸಿ: ತಾಲೂಕಿನಲ್ಲಿ ಜುಲೈ ತಿಂಗಳಲ್ಲಿ ಅಧಿಕ ಮಳೆಯಾಗಿದ್ದು ತಾಲೂಕಿನ ಪ್ರಮುಖ ಬೆಳೆಯಾದ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು ಈ ಕೆಳಗಿನ ನಿಯಂತ್ರಣ ಕ್ರಮ ಕೈಗೊಳ್ಳಬೇಕಾಗಿದೆ.

ಅಡಿಕೆ ಕಾಯಿ ಕೊಳೆರೋಗ ನಿಯಂತ್ರಣಕ್ಕೆ ಈಗಾಗಲೇ ಶೇಕಡಾ 1ರ ಬೋರ್ಡೋ ದ್ರಾವಣ ಸಿಂಪಡಣೆ ಮಾಡಿ 25-30 ದಿನಗಳಾಗಿದ್ದಲ್ಲಿ ಮಳೆ ಕಡಿಮೆಯಾದಾಗ ಮುಂಜಾಗ್ರತೆಯ ದೃಷ್ಟಿಯಿಂದ ಮತ್ತೊಮ್ಮೆ ಬೋರ್ಡೋ ದ್ರಾವಣ ಸಿಂಪಡಿಸಬೇಕು.

300x250 AD

ಕೊಳೆ ರೋಗ ಕಾಣಿಸಿಕೊಂಡಲ್ಲಿ ತಕ್ಷಣದಲ್ಲಿ ಕಾಯಿ ಕೊಳೆ ರೋಗ ಪಿಡಿತ ಅಡಿಕೆ ಮರದ ಕೊನೆಗಳಿಗೆ ಮತ್ತು ಕೆಳ ಭಾಗದ ಮೂರ್ನಾಲ್ಕು ಅಡಿಕೆ ಹೆಡೆಗಳಿಗೆ ಹಾಗೂ ಸುತ್ತಲಿನ 3-4 ಮರಗಳಿಗೆ ಮೆಟಲಾಕ್ಸಿಲ್ 35 ಡಬ್ಲೂ.ಎಸ್ 1 ಗ್ರಾಂ ಅಥವಾ ಮೆಟಲಾಕ್ಸಿಲ್ ಎಂ.ಜೆಡ್ 2 ಗ್ರಾಂ ಅಥವಾ ಮೆಟಲಾಕ್ಸಿಲ್+ ಮ್ಯಾಂಕೊಜೆಬ್ ಇರುವ ಶೀಲೀಂಧ್ರ ನಾಶಕವನ್ನು 2 ಗ್ರಾಂ ಪ್ರತಿ ಲೀಟ‌ರ್ ನೀರಿಗೆ ಬೆರೆಸಿ ಸಿಂಪಡಿಸಬೇಕು ಮತ್ತು ಒಂದು ವಾರದೊಳಗೆ ಸದರಿ ತೋಟಕ್ಕೆ ಶೇಕಡಾ 1ರ ಬೋರ್ಡೊ ದ್ರಾವಣ ಸಿಂಪಡಿಸಬೇಕು. ಕೊಳೆ ರೋಗ ಪೀಡಿತ ಅಡಿಕೆ ಕಾಯಿಯನ್ನು ಹೆಕ್ಕಿ ತೋಟದಿಂದ ಹೊರಹಾಕಬೇಕು.

Share This
300x250 AD
300x250 AD
300x250 AD
Back to top