Slide
Slide
Slide
previous arrow
next arrow

ನಿರೂಪಕಿ ಅಪರ್ಣಾ ನಿಧನ: ಧವಳೋ ಸಾವರ್ಕರ್ ಸಂತಾಪ

300x250 AD

ಜೋಯಿಡಾ: ಅಚ್ಚ ಕನ್ನಡದ ನಿರೂಪಕಿ,ತಮ್ಮ ವಾಕ್ ಚಾತುರ್ಯದ ಮೂಲಕ ಕನ್ನಡಿಗರ ಮನಗೆದ್ದ ಅಪರ್ಣಾ ವಸ್ತಾರೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿ ನಿಧನದ ಸುದ್ದಿ ಕೇಳಿ ಅತೀವ ದುಃಖವಾಗಿದೆ ಎಂದು ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಸಾವರ್ಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಿನಿಮಾ ರಂಗ,90ದಶಕದಲ್ಲಿ ಕನ್ನಡ ಚಂದನ ವಾಹಿನಿಯಲ್ಲಿ ನಿರೂಪಕರಾಗಿ, ಭಾರತ ಸರ್ಕಾರದ ವಿವಿಧ ಕಾರ್ಯಕ್ರಮದ ನಿರೂಪಣೆ, ರೇಡಿಯೋ ಜಾಕಿಯಾಗಿ,ಕಿರು ತೆರೆಯಲ್ಲಿ,ಕನ್ನಡ ಪ್ರಭ ದಿನಪತ್ರಿಕೆಯ ಅಂಕಣಕಾರರಾಗಿ ಹೀಗೆ ಬಹುಮುಖ ಪ್ರತಿಭೆಯನ್ನು ಹೊಂದಿದ್ದ ಅಪರ್ಣರವರು ಸಣ್ಣ ವಯಸ್ಸಿನಲ್ಲೇ ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದು, ನೋವು ತಂದಿದೆ.ಭಗವಂತ ಅವರ ದಿವ್ಯ ಆತ್ಮಕ್ಕೆ ಚಿರಶಾಂತಿ ನೀಡಲಿ,ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

300x250 AD
Share This
300x250 AD
300x250 AD
300x250 AD
Back to top