Slide
Slide
Slide
previous arrow
next arrow

ಮಳೆ ಆರ್ಭಟಕ್ಕೆ ಮನೆಗೆ ಹಾನಿ: ತಹಶೀಲ್ದಾರ್ ಪರಿಶೀಲನೆ

300x250 AD

ಸಿದ್ದಾಪುರ : ಸುರಿಯುತ್ತಿರುವ ಮಳೆಯಿಂದಾಗಿ ಮನೆಗೆ ಹಾನಿಯಾಗಿದ್ದು ಅಕ್ಕ ಪಕ್ಕದ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದ್ದು ಸ್ಥಳ ಪರಿಶೀಲಿಸುವಂತೆ ಸಂಪಖಂಡ ಗ್ರಾಮ‌ ನಿವಾಸಿಗಳು ಅಧಿಕಾರಿಗಳಿಗೆ ಮನವಿ ನೀಡಿದ್ದರು.

ಸ್ಥಳಕ್ಕೆ ತಹಶೀಲ್ದಾರ್ ಎಂ. ಆರ್.ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ಬೀಳುವ ಸಂದರ್ಭದಲ್ಲಿ ಓಡಾಡದಂತೆ ಎಚ್ಚರಿಕೆಯಿಂದಿರಿ ಎಂದು ಜನರಿಗೆ ಮನವಿ ಮಾಡಿದರು.
ಈ ಮನೆಯಲ್ಲಿ ವಾಸವಿದ್ದ 5 ಕುಟುಂಬದ ಪೈಕಿ ಎರಡು ಕುಟುಂಬಗಳು ಈ ಮನೆಯಲ್ಲಿ ಹಾಲಿ ವಾಸ ಮಾಡುತ್ತಿದ್ದಾರೆ, ಈಗ ವಿಪರೀತ ಮಳೆ ಬೀಳುತ್ತಿರುವುದರಿಂದ ಸ್ಥಳ ಬದಲಾಯಿಸಲು ಸಾಧ್ಯವಿಲ್ಲ. ಅಲ್ಲದೆ ಪ್ಲಾಸ್ಟಿಕ್ ಹಾಕಿ ಭದ್ರತೆ ವಹಿಸಿದ್ದೀರಿ. ಆದ್ದರಿಂದ ಅಪಾಯವಾಗುವ ಸಾಧ್ಯತೆ ಕಡಿಮೆ ಇದೆ. ಅಂತಹ ಸಂದರ್ಭ ಬಂದರೆ ಅಗತ್ಯ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ಯೋಗೇಶ, ಮನೋಜ, ಅರಣ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top