Slide
Slide
Slide
previous arrow
next arrow

ಅವರ್ಸಾದಲ್ಲಿ ಬಿಜೆಪಿ ಯುವ ಮೋರ್ಚಾದಿಂದ ಶ್ಯಾಮ್‌ಪ್ರಸಾದ ಮುಖರ್ಜಿ ಜನ್ಮದಿನ

300x250 AD

ಅಂಕೋಲಾ: ಬಿಜೆಪಿ ಅಂಕೋಲಾ ಮಂಡಲದ ಯುವಮೋರ್ಚಾ ವತಿಯಿಂದ ಆವರ್ಸಾದ ಭೂದೇವಿ ದೇವಸ್ಥಾನದಲ್ಲಿ ವೃಕ್ಷಾರೋಪಣ ಹಾಗೂ ಗೋ ಪೂಜೆ ಗೋಗ್ರಾಸ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ್ ಶಾಮಪ್ರಸಾದ ಮುಖರ್ಜಿಯವರ ಪೋಟೊಕ್ಕೆ ಪುಷ್ಪಾರ್ಚನೆ ಮಾಡಿ, ಗೋವಿಗೆ ಹಿಂದೂ ಧರ್ಮದಲ್ಲೇ ಪವಿತ್ರ ಸ್ಥಾನ ಗೋಪೂಜೆ ಹಾಗೂ ಗೋಗ್ರಾಸ ಸಮರ್ಪಣೆ ಮಾಡಿದ್ದು ಉತ್ತಮ ಕೆಲಸ ,ಇಂತಹ ಸೇವೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ ಎಂದರು,ಶಾಮಪ್ರಸಾದ ಮುಖರ್ಜಿಯವರ ಸಾಧನೆ ಬಗ್ಗೆ ಮಾತನಾಡಿದರು.

ಮಂಡಲಾಧ್ಯಕ್ಷರಾದ ಗೋಪಾಲಕೃಷ್ಣ ವೈದ್ಯ ಶಾಮಪ್ರಸಾದ ಮುಖರ್ಜಿಯವರ ಜನ್ಮದಿನದ ಪ್ರಯುಕ್ತ ಪರಿಸರ ದಿನ ಹಾಗೂ ಗೋಪೂಜೆಯನ್ನು ಯುವಮೋರ್ಚಾದವರು ಹಮ್ಮಿಕೊಂಡಿದ್ದು ಸಂಕನೂರ್ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದೆ, ಶಾಮಪ್ರಸಾದ ಮುಖರ್ಜಿಯವರ ಜೀವನ‌ಗಾಥೆಯನ್ನು ತಿಳಿಸಿದರು.
ಯುವಮೋರ್ಚಾ ಅಧ್ಯಕ್ಷ ನಿಲೇಶ್ ನಾಯ್ಕ,ಪಕ್ಷದ ಹಿರಿಯ ಮುಖಂಡರಾದ ಸಾಯಿಕಿರಣ್ ಶೇಠಿಯಾ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀಧರ ನಾಯ್ಕ ,ಆವರ್ಸಾ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಮಹಾದೇವ ತಳೇಕರ,ಅಗಸೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷ ನಾರಾಯಣ ಹೆಗಡೆ, ಶಕ್ತಿ ಕೇಂದ್ರ ಪ್ರಮುಖರಾದ ಉದಯ್ ನಾಯ್ಕ,ರಾಜೇಶ ನಾಯ್ಕ , ಮಹೇಶ ನಾಯ್ಕ ,ಗ್ರಾಪಂ ಸದಸ್ಯರಾದ ಶಾಂತೇಶ ನಾಯ್ಕ,ಯುವಮೋರ್ಚಾ ಉಪಾಧ್ಯಕ್ಷರಾದ ಸುರೇಶ ಗೌಡ ಸದಸ್ಯರಾದ ಹರೀಶ ನಾಯ್ಕ ಪಕ್ಷದ ಕಾರ್ಯಕರ್ತರು ಇದ್ದರು ಮಂಡಲ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಾಂಕ ಹೆಗಡೆ ಸ್ವಾಗತಿಸಿ ನಿರೂಪಿಸಿದರು.ಯುವಮೋರ್ಚಾ ಸದಸ್ಯ ಸಂಜಯ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top