Slide
Slide
Slide
previous arrow
next arrow

ಮನರಂಜಿಸಿದ ಸಂಗೀತ ಗೋಷ್ಠಿ

300x250 AD

ಸಿದ್ದಾಪುರ: ತಾಲೂಕಿನ ಭುವನಗಿರಿ ದೇವಸ್ಥಾನದಲ್ಲಿ ಸುಷಿರ ಸಂಗೀತ ಪರಿವಾರದ ಸಂಯೋಜನೆಯ ಸಂಗೀತ ಗೋಷ್ಠಿ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.

ಪ್ರತಿ ತಿಂಗಳ ಕೊನೆಯ ಮಂಗಳವಾರ ನಡೆಯುವ ಸಂಗೀತ ಗೋಷ್ಠಿ ಸರಣಿಯ ಒಂಬತ್ತನೇ ಈ ಕಾರ್ಯವನ್ನು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ‘ಸುಶ್ರಾವ್ಯ’ ಸಂಗೀತ ಸಂಸ್ಥೆಯ ಸ್ಥಾಪಕಿ ಭವ್ಯಾ ಭಟ್ಟ ಕಲ್ಮನೆ ನಡೆಸಿಕೊಟ್ಟರು. ಅವರು ಪ್ರಾರಂಭದಲ್ಲಿ ರಾಗ ಮಾಲಕಂಸ ಪ್ರಸ್ತುತ ಪಡಿಸಿ, ನಂತರ ಭಕ್ತಿ ರಚನೆ ಹಾಗೂ ಅಭಂಗಗಳನ್ನು ಹಾಡಿ ರಂಜಿಸಿದರು. ಸುಶ್ರಾವ್ಯ ಸಂಗೀತ ಸಂಸ್ಥೆಯ ವಿದ್ಯಾರ್ಥಿನಿಯರಾದ ಕು. ಶರಧಿ ಶಾಸ್ತ್ರಿ, ಕು.ಶ್ರಾವ್ಯ ಭಟ್ಟ, ಕು.ನಿಶ್ಚಿತಾ ಭಟ್ಟ ಭಕ್ತಿರಚನೆಗಳನ್ನು ಹಾಡಿದರು. ಡಾ. ಸಮೀರ ಭಾದ್ರಿಯವರ ಹಾರ್ಮೋನಿಯಂ ಮತ್ತು ಮಹೇಶ ಹೆಗಡೆ ಹೊಸಗದ್ದೆಯವರ ತಬಲಾ ಸಾತ್ ಸಂಗೀತ ಕಾರ್ಯಕ್ರಮಕ್ಕೆ ಮೆರಗು ತಂದಿತು. ಎಂ.ಕೆ.ನಾಯ್ಕ ಹೊಸಳ್ಳಿ ಕಲಾವಿದರನ್ನು ಪರಿಚಯಿಸಿ ಸ್ವಾಗತಿಸಿದರು. ಸುಷಿರ ಸಂಗೀತ ಪರಿವಾರದ ಸಂಚಾಲಕ ನಾರಾಯಣ ಹೆಗಡೆ ಕಲ್ಲಾರೆಮನೆ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top