ಶಿರಸಿ: ಅಕ್ಷಯಾ ತೃತೀಯಾದ ಶುಭ ದಿನದಂದು ಶಿರಸಿಯ ಜನತೆ ಇಲ್ಲಿಯ ಸಿಂಪಿಗಲ್ಲಿಯಲ್ಲಿರುವ ಪ್ರದೀಪ್ ಜ್ಯುವೆಲ್ಲರ್ಸ್ ( ಸರಾಫ್ ಬಝಾರ್ ) ಅಂಗಡಿಯಲ್ಲಿ ಬಂಗಾರ ಕೊಂಡುಕೊಳ್ಳಲು ಹೆಚ್ಚಿನ ಆಸಕ್ತಿ ತೋರಿಸಿದ್ದಾರೆ. ಖ್ಯಾತ ಬೆಳ್ಳಿ, ಬಂಗಾರದ ಆಭರಣದ ತಯಾರಕರಾದ ಪ್ರದೀಪ್ ಎಲ್ಲಂಕರ್ ಒಡೆತನದ ಸರಾಫ್ ಬಝಾರ್, ಜಿಲ್ಲೆಯಾದ್ಯಂತ ತನ್ನ ಗುಣಮಟ್ಟದ ಬಂಗಾರ ಆಭರಣಕ್ಕೆ ಹೆಸರುವಾಸಿಯಾಗಿದ್ದು, ಶುಕ್ರವಾರದ ಶುಭ ಸಂದರ್ಭದಲ್ಲಿ ಬಂಗಾರವನ್ನು ಕೊಳ್ಳುವ ಮೂಲಕ ಗ್ರಾಹಕರು ಅಕ್ಷಯ ತೃತೀಯಾವನ್ನು ಸಂಭ್ರಮದಿಂದ ಆಚರಿಸಿದರು.
ಜಿಲ್ಲೆಯಲ್ಲಿಯೇ ಅತಿದೊಡ್ಡ ಬಂಗಾರದ ಆಭರಣಗಳ ಶೌರೂಮ್ ಎಂದು ಹೆಸರುವಾಸಿಯಾಗಿರುವ ಪ್ರದೀಪ್ ಜ್ಯುವೆಲ್ಲರ್ಸ್, ಅಕ್ಷಯಾ ತೃತೀಯ ಅಂಗವಾಗಿ ಅನೇಕ ಕೊಡುಗೆಗಳನ್ನು, ಡಿಸ್ಕೌಂಟ್ ಗಳನ್ನು ತನ್ನ ಗ್ರಾಹಕರಿಗೆ ನೀಡಿತ್ತು.
ಪ್ರದೀಪ್ ಜ್ಯವೇಲ್ಲರ್ಸ್ ನಲ್ಲಿ ಅಕ್ಷಯ ತೃತೀಯಾಕ್ಕೆ ಖರೀದಿ ಜೋರು
![](https://euttarakannada.in/wp-content/uploads/2024/05/IMG-20240511-WA0034-730x438.jpg)