Slide
Slide
Slide
previous arrow
next arrow

ಲೋಕಸಭೆ ಚುನಾವಣೆ; ಪಕ್ಷದ ಹಿತಕ್ಕಾಗಿ ಸ್ಪರ್ಧಿಸಲ್ಲ ಎಂದ ಉದ್ಯಮಿ ರಾಘವೇಂದ್ರ ಭಟ್

300x250 AD

ಶಿರಸಿ: ಲೋಕಸಭೆ ಚುನಾವಣೆಯ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಚಿಸಿದ್ದ ಶಿರಸಿಯ ಉದ್ಯಮಿ ರಾಘವೇಂದ್ರ ಭಟ್ಟ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜನಸೇವೆ ಮಾಡುವ ನಿಟ್ಟಿನಲ್ಲಿ ಹಿಂದುತ್ವಕ್ಕೆ ಬದ್ಧನಾಗಿ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಲಾಗಿತ್ತು. ಆದರೆ ಭಾರತೀಯ ಜನತಾ ಪಕ್ಷದ ಹಿರಿಯರ ಮಾತಿಗೆ ಕಿವಿಗೊಟ್ಟು ಸ್ಪರ್ಧೆ ವಿಚಾರ ಕೈಬಿಡಲಾಗಿದೆ. ಪ್ರಧಾನಿ ಮೋದಿಯನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ನನ್ನ ಸ್ಪರ್ಧೆಯಿಂದ ಜಿಲ್ಲೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಬಾರದೆಂಬುದು ಹಿರಿಯರ ವಿಚಾರವಾಗಿದೆ.

300x250 AD

ಈ ನಿಟ್ಟಿನಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯಲು ತೀರ್ಮಾನಿಸಲಾಗಿದೆ. ಆದರೆ ಕ್ಷೇತ್ರದಲ್ಲಿ ಸದಾ ಸಕ್ರಿಯರಾಗಿ ಇರುವುದರ ಮೂಲಕ ಜನಸೇವೆಗೆ ಸಿದ್ಧರಿರುವುದಾಗಿ ಹೇಳಿದ್ದು, ಜೊತೆಗೆ ಜಿಲ್ಲೆಗೆ ಅತ್ಯಾವಶ್ಯವಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ, ಜನಜಾಗೃತಿ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top