Slide
Slide
Slide
previous arrow
next arrow

ವಜ್ರಳ್ಳಿಯಲ್ಲಿ ಬಸ್ ನಿಲುಗಡೆಗಾಗಿ ಆಗ್ರಹ; ಪ್ರತಿಭಟನೆಯ ಎಚ್ಚರಿಕೆ

300x250 AD

ಅಂಕೋಲಾ: ಯಲ್ಲಾಪುರದಿಂದ ಸಂಜೆ 4:15ಕ್ಕೆ ಹೊರಡುವ ರಾಯಚೂರು-ಕಾರವಾರ ಬಸ್ ಯಲ್ಲಾಪುರ ಮತ್ತು ಗುಳ್ಳಾಪುರದಿಂದ ಬಂದ ಪ್ರಯಾಣಿಕರಿಗೆ ವಜ್ರಳ್ಳಿಯಲ್ಲಿ ಬಸ್ ನಿಲುಗಡೆ ಇಲ್ಲವೆಂದು ರಾಮನಗುಳಿಯಲ್ಲೇ ಇಳಿಸಿ ಬರುತ್ತಿದ್ದಾರೆ. ಪ್ರತಿಬಾರಿ ವಿದ್ಯಾರ್ಥಿಗಳಿಗೆ, ಪ್ರಯಾಣಿಕರಿಗೆ ಇದೇ ರೀತಿ ತೊಂದರೆ ಉಂಟುಮಾಡುತ್ತಿದ್ದಾರೆ. ಈ ಹಿಂದೆ ಅಂಕೋಲಾ‌ ಬಸ್ ನಿಲ್ದಾಣಾಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರಿಗೆ ಸಾಕಷ್ಟು ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಚಾಲಕ- ನಿರ್ವಾಹಕರ‌ ಮೇಲೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಈ ಬಸ್ ನಿಲುಗಡೆ ಮಾಡದೇ ಇರುವುದು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ ವಜ್ರಳ್ಳಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ರಾಯಚೂರು ಬಸ್ ತಡೆಹಿಡಿದು ಪ್ರತಿಭಟಿಸುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ ಅಣ್ಣಪ್ಪ ನಾಯ್ಕ ವಜ್ರಳ್ಳಿ ಪತ್ರಿಕೆ ಮೂಲಕ ಎಚ್ಚರಿಕೆಯನ್ನು ನೀಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top