Slide
Slide
Slide
previous arrow
next arrow

ಏ‌.8ಕ್ಕೆ ಅಜಿತ ಮನೊಚೇತನಾ ವಾರ್ಷಿಕ ಮಿಲನ: ಸನ್ಮಾನ

300x250 AD

ಶಿರಸಿ: ಶಿರಸಿಯ ಮರಾಠಿಕೊಪ್ಪದ ಅಜಿತ ಮನೋಚೇತನಾ ಕೇಂದ್ರದಲ್ಲಿ ಏ.8ರ ಬೆಳಿಗ್ಗೆ 10-15ಕ್ಕೆ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ. ಮತದಾನ ಜಾಗೃತಿ ಪಾದಯಾತ್ರೆಗೆ ಸಹಾಯಕ ಆಯುಕ್ತರು ಶ್ರೀಮತಿ ಅಪರ್ಣಾ ರಮೇಶ ಚಾಲನೆ ನೀಡಲಿದ್ದು, ವಿವಿಧ ಸಂಸ್ಥೆಗಳ ಕಾರ್ಯಕರ್ತರು, ತಾಲೂಕಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾಧಿಕಾರಿಗಳು, ವಿದ್ಯಾರ್ಥಿಗಳು, ಮಹಿಳೆಯರು ಪಾದಾಯಾತ್ರೆಯಲ್ಲಿ ಭಾಗವಹಿಸುತ್ತಾರೆ.
11-00 ಘಂಟೆಗೆ ನಡೆಯುವ ಸಮಾವೇಶದಲ್ಲಿ ಹಿರಿಯ ಸಾಮಾಜಿಕ ಕಾರ್ಯಕರ್ತರಾದ ವಿ.ಆರ್.ಹೆಗಡೆ ಹೊನ್ನೆಗದ್ದೆ ಇವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಟ್ರಸ್ಟಿಗಳಾದ ಡಾ. ಜಿ.ಎಮ್.ಹೆಗಡೆ ಸಾಧನೆಗೈದ ವಿಶೇಷ ಮಕ್ಕಳಿಗೆ ಪ್ರಶಸ್ತಿ ನೀಡಲಿದ್ದಾರೆ. ಡಾ. ಕಮಲ ಪಟೇಲ್ ಅವರು ಫಿಜಿಯೋಥೆರಪಿ ಕುರಿತು ಪಾಲಕರು ಶಿಕ್ಷಕರ ಜೊತೆ ಸಂವಾದ ಮಾಡಲಿದ್ದಾರೆ. ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.

300x250 AD
Share This
300x250 AD
300x250 AD
300x250 AD
Back to top