Slide
Slide
Slide
previous arrow
next arrow

ಡಾ.ಬಾಬು ಜಗಜೀವನ ರಾಂ ಜನ್ಮದಿನಾಚರಣೆ

300x250 AD

ಸಿದ್ದಾಪುರ: ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ, ಪಟ್ಟಣ ಪಂಚಾಯತ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪ,ಜಾತಿ,ಪ,ವರ್ಗಗಳ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಡಾ.ಬಾಬು ಜಗಜೀವನ ರಾಂ ರವರ 117 ನೇ ಜಯಂತಿ ಕಾರ್ಯಕ್ರಮವನ್ನು ತಾಲೂಕು ಪಂಚಾಯತ ಸಭಾಂಗಣದಲ್ಲಿ ಇಂದು ಆಚರಿಸಲಾಯಿತು
ಸದರಿ ಕಾರ್ಯಕ್ರಮದಲ್ಲಿ ತಹಶಿಲ್ದಾರರಾದ ವಿಶ್ವಜೀತ ಮೆಹತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಢಾ.ಬಾಬು ಜಗಜೀವನ ರಾಂ ರವರ ಆದರ್ಶಗಳನ್ನು ಇಂದಿನ ಪೀಳಿಗೆಯ ಜನರು ಅಳವಡಿಸಿಕೊಂಡು ದೇಶದ & ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ತಿಳಿಸಿದರು

ಸರಕಾರಿ ಪ್ರೌಢಶಾಲೆ ಜಿಡ್ಡಿ ಸಹಶಿಕ್ಷಕ ವಿಷ್ಣು ನಾಯ್ಕ್ ಇವರು ಡಾ.ಬಾಬು ಜಗಜೀವನ ರಾಂ ರವರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು. ಸಹಾಯಕ ನಿರ್ದೇಶಕ ಬಸವರಾಜ ಬಂಡೇರ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳು ಶ್ರೀಮತಿ ವಿಜಯ, ಸಂಘಟನೆಗಳ ಮುಖಂಡರಾದ ನಂದನ ಬೋರ್ಕರ್, ಹೆಚ್.ಕೆ.ಶಿವಾನಂದ. ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಹಾಜರಿದ್ದರು .ಕು.ಕವಿತಾ ನಾಯ್ಕ ನಿರೂಪಣೆ ಮಾಡಿದರು . ಶ್ರೀಮತಿ ವಿನೋದಾ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top