Slide
Slide
Slide
previous arrow
next arrow

ನಾಳೆ ಮುಖ್ಯಮಂತ್ರಿ ನಾಟಕ ಪ್ರದರ್ಶನ

300x250 AD

ಶಿರಸಿ: ದೇಶ,ವಿದೇಶಗಳಲ್ಲೂ ಜನಪ್ರಿಯಗಳಿಸಿದ ಜನಪ್ರಿಯ ರಾಜಕೀಯ ನಾಟಕ ಮುಖ್ಯಮಂತ್ರಿ ಮಾ.16ರ ಸಂಜೆ 7ಕ್ಕೆ ನಗರದ ರಂಗಧಾಮದಲ್ಲಿ ನಡೆಯಲಿದೆ.

ಕಳೆದ 44 ವರ್ಷದಿಂದ ನಿರಂತರ ಪ್ರದರ್ಶನ ಕಾಣುತ್ತಿರುವ ಮುಖ್ಯಮಂತ್ರಿ ನಾಟಕ ಇದು 824ನೇ ಪ್ರದರ್ಶನವಾಗಿದೆ. ಪ್ರಧಾನ ಭೂಮಿಕೆಯಲ್ಲಿ ಪ್ರಸಿದ್ದ ನಟ ಮುಖ್ಯಮಂತ್ರಿ ಚಂದ್ರು ನಟಿಸಲಿದ್ದಾರೆ. ಮೂವತ್ತಕ್ಕೂ ಅಧಿಕ ಕಲಾವಿದರು ರಂಗದಲ್ಲಿ ಕಾಣಿಸಿಕೊಳ್ಳಲಿದ್ದು, ಪ್ರಸಿದ್ಧ ರಂಗಕರ್ಮಿ ಬಿ.ವಿ.ರಾಜಾರಾಮ‌ ನಿರ್ದೇಶಿದ್ದಾರೆ.

300x250 AD

ನಾಟಕ ಪ್ರದರ್ಶನಕ್ಕೆ ಶಾಸಕ ಭೀಮಣ್ಣ‌ ನಾಯ್ಕ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ, ಕಸಾಪ ಜಿಲ್ಲಾ ಅಧ್ಯಕ್ಷ ಬಿ‌.ಎನ್.ವಾಸರೆ, ಸ್ಕೋಡವೇಸ್ ಮುಖ್ಯಸ್ಥ ವೆಂಕಟೇಶ ನಾಯ್ಕ ಭಾಗವಹಿಸಲಿದ್ದಾರೆ. ಸ್ಕೋಡವೇಸ್, ನಯನಾ ಫೌಂಡೇಶನ್, ನೆಮ್ಮದಿ ಬಳಗ, ಚಿಂತನ ರಂಗ ಅಧ್ಯಯನ ಕೇಂದ್ರ ಸಹಕಾರ ನೀಡಿವೆ ಎಂದು ಪ್ರಕಟಣೆ ತಿಳಿಸಿದೆ.

Share This
300x250 AD
300x250 AD
300x250 AD
Back to top