Slide
Slide
Slide
previous arrow
next arrow

ಯಶಸ್ವಿಯಾಗಿ ಸಂಪನ್ನಗೊಂಡ “ಹಂಗಾರಖಂಡ ಹಬ್ಬ”

300x250 AD

ಸಿದ್ದಾಪುರ: ತಾಲೂಕಿನ ಹಂಗಾರಖಂಡದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 7ನೇ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.1, ಶುಕ್ರವಾರದಂದು ಅತೀ ಶೃದ್ಧಾ-ಭಕ್ತಿ ಭಾವನೆಯಿಂದ, ವಿಜೃಂಭಣೆಯಿಂದ ವೇ|ಮೂ| ಶ್ರೀ ವಿನಾಯಕ ಸುಬ್ರಾಯ ಭಟ್ಟ ಇವರ ಮಾರ್ಗದರ್ಶನ,ದಿವ್ಯ ಉಪಸ್ಥಿತಿಯಲ್ಲಿ  ನಡೆಯಿತು. ಅಂದು ಬೆಳಿಗ್ಗೆ 9ಗಂಟೆಯಿಂದ ಶ್ರೀ ದೇವರಿಗೆ ವಿವಿಧ ಪೂಜೆಗಳು, ಹೋಮ ಹವನಾಧಿಗಳು,ಧಾರ್ಮಿಕ ಕೈಂಕರ್ಯಗಳು, ಪೂಜಾ ವಿಧಿ ವಿಧಾನಗಳು, ಮಧ್ಯಾಹ್ನ ಮಹಾಮಂಗಳಾರತಿ. ತೀರ್ಥಪ್ರಸಾದ ವಿತರಣೆ, ವಿಪ್ರಾಶೀರ್ವಾದ ನಂತರ ಅನ್ನ ಸಂತರ್ಪಣೆ ನಡೆಯಿತು.

ಸಂಜೆ ಸಭಾ ಕಾರ್ಯಕ್ರಮ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮ ಮಾಡಲಾಗಿ ಸಭೆಯ ಅಧ್ಯಕ್ಷತೆಯನ್ನು, ಶ್ರೀ ನಾಗಚೌಡೇಶ್ವರಿ ಸೇವಾ ಸಮಿತಿ ಅಧ್ಯಕ್ಷ ರಮೇಶ ಎನ್. ನಾಯ್ಕ ಬಾಳೇಕೈ ಅಧ್ಯಕ್ಷತೆ ವಹಿಸಿದ್ದು, ವೇ.ಮೂ.ವಿನಾಯಕ್ ಭಟ್ ಮತ್ತಿಹಳ್ಳಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ, ನಾಣಿಕಟ್ಟಾ ಇದರ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ, ತ್ಯಾಗಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಯಶೋಧಾ ದತ್ತಾತ್ರೇಯ ನಾಯ್ಕ್, ಸದಸ್ಯ ಗಣಪತಿ ಹೆಗಡೆ, ನಾಗಚೌಡೇಶ್ವರಿ ಸೇವಾ ಸಮಿತಿ ಕಾರ್ಯದರ್ಶಿ ಎ.ಜಿ.ನಾಯ್ಕ , ಊರಿನ ಹಿರಿಯರಾದ ಜಿ.ವಿ.ನಾಯ್ಕ,  ಆರ್. ಎ.ನಾಯ್ಕ ಉಪಸ್ಥಿತರಿದ್ದರು. ಈ ವೇಳೆ ನಿವೃತ್ತ ಮುಖ್ಯಾಧ್ಯಾಪಕ ಗಣಪತಿ ವಿ. ಹೆಗಡೆ, ಹಂಗಾರಖಂಡ, ನಿವೃತ್ತ ಯೋಧ ಗುರುಮೂರ್ತಿ ಆರ್. ನಾಯ್ಕ, ಗವಿನಗುಡ್ಡ ಇವರಿಗೆ ಗೌರವ ಸಮರ್ಪಣೆ ಬಹಳ ಸುಂದರವಾಗಿ, ನಡೆಯಿತು. ಚಿಕ್ಕ ಮಕ್ಕಳಿಂದ ಮನರಂಜನಾ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. .ಹಾಗೂ ರಾತ್ರಿ 9.30 ರಿಂದ  ಶ್ರೀ ಸಿಗಂದೂರು ಚೌಡಮ್ಮ ದೇವಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಸಿಗಂದೂರು ಇವರಿಂದ ಮಾಗಧವಧೆ, ಚಕ್ರವ್ಯೂಹ, ಮೀನಾಕ್ಷಿ ಕಲ್ಯಾಣ ಅದ್ದೂರಿ ಯಕ್ಷಗಾನ ಪ್ರದರ್ಶನ ಅತ್ಯುತ್ತಮವಾಗಿ  ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಕಲಾಸಕ್ತರು ಆಗಮಿಸಿ ಶ್ರೀ ಚೌಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ರಾತ್ರಿ ಯಕ್ಷಗಾನವನ್ನೂ ಕೂಡ ಆಸ್ವಾದಿಸಿದರು.ಸಭಾ ಕಾರ್ಯಕ್ರಮದ ನಿರೂಪಣೆಯನ್ನು ರಮೇಶ ಟಿ. ನಾಯ್ಕ ನಡೆಸಿದರೆ ಸ್ವಾಗತ ಮತ್ತು ಪ್ರಸ್ತಾವನೆ ನುಡಿಯನ್ನು ಸಮಿತಿಯ ಕೋಶಾಧ್ಯಕ್ಷರಾದ ನಟರಾಜ ಎಮ್. ಹೆಗಡೆ ಸ್ಪುಟವಾಗಿ ನಡೆಸಿಕೊಟ್ಟರು.ಸ್ವಾಗತ ಗೀತೆಯನ್ನು ಶ್ರೀಮತಿ ಅರ್ಚನಾ ಸಂತೋಷ ನಡೆಸಿದರು. ವಂದನಾರ್ಪಣೆಯನ್ನು ವಾಸುದೇವ ನಾ. ನಾಯ್ಕ ‌ನಡೆಸಿಕೊಟ್ಟರು. ನಂತರ ಶ್ರೀ ಚೌಡೇಶ್ವರಿ ದೇವಿ ಸಿಗಂದೂರು ಮೇಳದವರಿಂದ, ಅದ್ಧೂರಿ ಯಕ್ಷಗಾನದ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.. ಮಾಗಧ, ಚಕ್ರವ್ಯೂಹ , ಮೀನಾಕ್ಷೀ ಕಲ್ಯಾಣ , ಪೌರಾಣಿಕ ಪ್ರಸಂಗ ಅದ್ಧೂರಿಯಾಗಿ ಜರುಗಿತು.

300x250 AD
Share This
300x250 AD
300x250 AD
300x250 AD
Back to top